<p>ಐ.ಎಸ್ ಉಗ್ರರ ರಕ್ತದಾಹದಿಂದ ಮುಕ್ತಿ ಪಡೆದು ಮತ್ತೆ ಸಾಂಸ್ಕೃತಿಕ ಶಕ್ತಿ ಪಡೆಯುತ್ತಿರುವ ಸಿರಿಯಾದ ಸಂಭ್ರಮ ತಿಳಿದು (ಪ್ರ.ವಾ., ಮೇ 13) ‘ಮಾನವೀಯತೆಯ ವೃಕ್ಷ ಚಿಗುರಿತು’ ಎಂದು ಸಂತೋಷವಾಯಿತು. ಧರ್ಮಾಂಧತೆಯ ಭಯೋತ್ಪಾದನೆ ಈ ಭೂಮಿಯಲ್ಲಿ ಉಳಿಯಲು ಸಾಧ್ಯವಿಲ್ಲ.ಅದೇ ರೀತಿ ತಾಲಿಬಾನೀಯರ ಅಟ್ಟಹಾಸವೂ ಕಳೆಗುಂದುತ್ತಿದೆ. ಅಫ್ಗಾನಿಸ್ತಾನದಲ್ಲಿ ಅವರು ನಾಶ ಮಾಡಿದ ಬುದ್ಧನ ವಿಗ್ರಹಗಳು ದುರಸ್ತಿಯ ಕಾಯಕಲ್ಪ ಪಡೆಯುತ್ತಿವೆ, ಬರ್ಲಿನ್ನ ಗೋಡೆ ಕುಸಿದಿದೆ, ಯುಗೊಸ್ಲಾವಿಯಾದಲ್ಲಿ ಶಾಂತಿ ಸ್ಥಾಪನೆಯಾಗಿದೆ, ಶ್ರೀಲಂಕಾದಲ್ಲಿ ಎಲ್ಟಿಟಿಇ ನಾಶವಾಗಿದೆ. ವಿಶ್ವಸಂಸ್ಥೆಯ ಉದ್ದೇಶಗಳಿಗೆ ಸಕಾರಾತ್ಮಕ ಪ್ರತಿಫಲ ದೊರೆಯುತ್ತಿದೆ.</p>.<p>ಆದರೂ ಧರ್ಮಾಂಧತೆ, ಸೇಡು, ಜನಾಂಗಿಯ ಪ್ರತೀಕಾರದ ದುರ್ಘಟನೆಗಳು ಮನುಷ್ಯನ ಪಾಶವೀ ಪ್ರವೃತ್ತಿಯಪ್ರತಿರೂಪಗಳಾಗಿ ಅಲ್ಲಲ್ಲಿ ಘಟಿಸುತ್ತಿರುವುದು ವಿಷಾದನೀಯ. ಮಾನವೀಯತೆ, ಸಹಬಾಳ್ವೆ, ಸಹನೆ-ಸಂಯಮ, ಸಮಾಗಮ ಸಿದ್ಧಾಂತವೇ ಸರ್ವಧರ್ಮಗಳ ಸಾರ. ನಮಗೆ ವಿಘಟಕರು ಬೇಕಾಗಿಲ್ಲ, ಸಂಘಟಕರು (ಬೆಸೆಯುವವರು) ಬೇಕಾಗಿದ್ದಾರೆ.</p>.<p><em><strong>- ಆಶೀಹಾಳ ತಿರುಪತಿ,ಹೊಸನಗರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಐ.ಎಸ್ ಉಗ್ರರ ರಕ್ತದಾಹದಿಂದ ಮುಕ್ತಿ ಪಡೆದು ಮತ್ತೆ ಸಾಂಸ್ಕೃತಿಕ ಶಕ್ತಿ ಪಡೆಯುತ್ತಿರುವ ಸಿರಿಯಾದ ಸಂಭ್ರಮ ತಿಳಿದು (ಪ್ರ.ವಾ., ಮೇ 13) ‘ಮಾನವೀಯತೆಯ ವೃಕ್ಷ ಚಿಗುರಿತು’ ಎಂದು ಸಂತೋಷವಾಯಿತು. ಧರ್ಮಾಂಧತೆಯ ಭಯೋತ್ಪಾದನೆ ಈ ಭೂಮಿಯಲ್ಲಿ ಉಳಿಯಲು ಸಾಧ್ಯವಿಲ್ಲ.ಅದೇ ರೀತಿ ತಾಲಿಬಾನೀಯರ ಅಟ್ಟಹಾಸವೂ ಕಳೆಗುಂದುತ್ತಿದೆ. ಅಫ್ಗಾನಿಸ್ತಾನದಲ್ಲಿ ಅವರು ನಾಶ ಮಾಡಿದ ಬುದ್ಧನ ವಿಗ್ರಹಗಳು ದುರಸ್ತಿಯ ಕಾಯಕಲ್ಪ ಪಡೆಯುತ್ತಿವೆ, ಬರ್ಲಿನ್ನ ಗೋಡೆ ಕುಸಿದಿದೆ, ಯುಗೊಸ್ಲಾವಿಯಾದಲ್ಲಿ ಶಾಂತಿ ಸ್ಥಾಪನೆಯಾಗಿದೆ, ಶ್ರೀಲಂಕಾದಲ್ಲಿ ಎಲ್ಟಿಟಿಇ ನಾಶವಾಗಿದೆ. ವಿಶ್ವಸಂಸ್ಥೆಯ ಉದ್ದೇಶಗಳಿಗೆ ಸಕಾರಾತ್ಮಕ ಪ್ರತಿಫಲ ದೊರೆಯುತ್ತಿದೆ.</p>.<p>ಆದರೂ ಧರ್ಮಾಂಧತೆ, ಸೇಡು, ಜನಾಂಗಿಯ ಪ್ರತೀಕಾರದ ದುರ್ಘಟನೆಗಳು ಮನುಷ್ಯನ ಪಾಶವೀ ಪ್ರವೃತ್ತಿಯಪ್ರತಿರೂಪಗಳಾಗಿ ಅಲ್ಲಲ್ಲಿ ಘಟಿಸುತ್ತಿರುವುದು ವಿಷಾದನೀಯ. ಮಾನವೀಯತೆ, ಸಹಬಾಳ್ವೆ, ಸಹನೆ-ಸಂಯಮ, ಸಮಾಗಮ ಸಿದ್ಧಾಂತವೇ ಸರ್ವಧರ್ಮಗಳ ಸಾರ. ನಮಗೆ ವಿಘಟಕರು ಬೇಕಾಗಿಲ್ಲ, ಸಂಘಟಕರು (ಬೆಸೆಯುವವರು) ಬೇಕಾಗಿದ್ದಾರೆ.</p>.<p><em><strong>- ಆಶೀಹಾಳ ತಿರುಪತಿ,ಹೊಸನಗರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>