<p>ಕರ್ನಾಟಕ– ಮಹಾರಾಷ್ಟ್ರ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆ (ಪ್ರ.ಜಾ., ಜ. 18) ಸಂವಿಧಾನಬದ್ಧ ಸ್ಧಾನದಲ್ಲಿರುವ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಎರಡೂ ರಾಜ್ಯಗಳ ನಡುವಿನ ಗಡಿ ವಿವಾದವು ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ ಈ ರೀತಿ ಕಿಡಿ ಹಚ್ಚುವ ಹೇಳಿಕೆಗಳನ್ನು ನೀಡಿದರೆ ಕೋರ್ಟ್ಗೆ ಅಗೌರವವನ್ನು ಸೂಚಿಸಿದಂತೆ. ಮಹಾನಗರಪಾಲಿಕೆ ಚುನಾವಣೆ ಹತ್ತಿರ ಬಂದಿರುವುದರಿಂದ ಅಲ್ಲಿನ ಮರಾಠಿಗರ ಭಾವನೆಗಳನ್ನು ಕೆರಳಿಸಿ ಮತಗಳನ್ನು ಸೆಳೆಯುವುದಕ್ಕೋಸ್ಕರ ಇಂತಹ ಉದ್ಧಟತನದ ಹೇಳಿಕೆಯನ್ನು ಉದ್ಧವ್ ನೀಡಿರಬಹುದು.</p>.<p>ಹಿಂದೆ ಗಡಿ ವಿವಾದ ಬಗೆಹರಿಸಲು ಆಯೋಗ ನೇಮಕವಾಗಬೇಕು ಎಂದು ಪಟ್ಟುಹಿಡಿದು, ಮಹಾಜನ್ ಆಯೋಗದ ನೇಮಕವನ್ನು ಸ್ವಾಗತಿಸಿದವರು ಮಹಾರಾಷ್ಟ್ರದವರೇ. ಮಹಾಜನ್ ವರದಿ ಬಂದ ನಂತರ ವರದಿ ತಮ್ಮ ಪರವಾಗಿ ಇಲ್ಲ ಎಂಬ ಕಾರಣ ನೀಡಿ ವರದಿಯನ್ನು ಧಿಕ್ಕರಿಸಿದವರೂ ಅವರೇ. ಈ ರೀತಿ ಕನ್ನಡಿಗರ ಭಾವನೆ ಹಾಗೂ ಸ್ವಾಭಿಮಾನವನ್ನು ಕೆಣಕುವಂತಹ ಹೇಳಿಕೆಗಳನ್ನು ಪದೇ ಪದೇ ನೀಡುವುದನ್ನು ಅಲ್ಲಿನ ಮುಖಂಡರು ಇನ್ನಾದರೂ ನಿಲ್ಲಿಸಲಿ.</p>.<p><strong>ಮಧು ಕೆ.,ಕೊಟ್ಟೂರು, ಬಳ್ಳಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕ– ಮಹಾರಾಷ್ಟ್ರ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆ (ಪ್ರ.ಜಾ., ಜ. 18) ಸಂವಿಧಾನಬದ್ಧ ಸ್ಧಾನದಲ್ಲಿರುವ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಎರಡೂ ರಾಜ್ಯಗಳ ನಡುವಿನ ಗಡಿ ವಿವಾದವು ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ ಈ ರೀತಿ ಕಿಡಿ ಹಚ್ಚುವ ಹೇಳಿಕೆಗಳನ್ನು ನೀಡಿದರೆ ಕೋರ್ಟ್ಗೆ ಅಗೌರವವನ್ನು ಸೂಚಿಸಿದಂತೆ. ಮಹಾನಗರಪಾಲಿಕೆ ಚುನಾವಣೆ ಹತ್ತಿರ ಬಂದಿರುವುದರಿಂದ ಅಲ್ಲಿನ ಮರಾಠಿಗರ ಭಾವನೆಗಳನ್ನು ಕೆರಳಿಸಿ ಮತಗಳನ್ನು ಸೆಳೆಯುವುದಕ್ಕೋಸ್ಕರ ಇಂತಹ ಉದ್ಧಟತನದ ಹೇಳಿಕೆಯನ್ನು ಉದ್ಧವ್ ನೀಡಿರಬಹುದು.</p>.<p>ಹಿಂದೆ ಗಡಿ ವಿವಾದ ಬಗೆಹರಿಸಲು ಆಯೋಗ ನೇಮಕವಾಗಬೇಕು ಎಂದು ಪಟ್ಟುಹಿಡಿದು, ಮಹಾಜನ್ ಆಯೋಗದ ನೇಮಕವನ್ನು ಸ್ವಾಗತಿಸಿದವರು ಮಹಾರಾಷ್ಟ್ರದವರೇ. ಮಹಾಜನ್ ವರದಿ ಬಂದ ನಂತರ ವರದಿ ತಮ್ಮ ಪರವಾಗಿ ಇಲ್ಲ ಎಂಬ ಕಾರಣ ನೀಡಿ ವರದಿಯನ್ನು ಧಿಕ್ಕರಿಸಿದವರೂ ಅವರೇ. ಈ ರೀತಿ ಕನ್ನಡಿಗರ ಭಾವನೆ ಹಾಗೂ ಸ್ವಾಭಿಮಾನವನ್ನು ಕೆಣಕುವಂತಹ ಹೇಳಿಕೆಗಳನ್ನು ಪದೇ ಪದೇ ನೀಡುವುದನ್ನು ಅಲ್ಲಿನ ಮುಖಂಡರು ಇನ್ನಾದರೂ ನಿಲ್ಲಿಸಲಿ.</p>.<p><strong>ಮಧು ಕೆ.,ಕೊಟ್ಟೂರು, ಬಳ್ಳಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>