‘ಧರ್ಮ– ಜಾತಿಗಳ ಆಧಾರದಲ್ಲೇ ಜನರು ಮತ ಚಲಾಯಿಸುತ್ತಿರುವಾಗ, ಭಾರತ್ ಬಂದ್ನಿಂದ ಸಾಧಿಸುವುದಾದರೂ ಏನನ್ನು’ ಎಂದು ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಎತ್ತಿರುವ ಪ್ರಶ್ನೆ (ಪ್ರ.ವಾ., ದಿನದ ಟ್ವೀಟ್, ಸೆ. 11) ನಮ್ಮನ್ನು ಯೋಚಿಸುವಂತೆ ಮಾಡಬೇಕಿದೆ. ಜಾತಿಧರ್ಮದಷ್ಟೇ ಹಣದ ಆಮಿಷವೂ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದೊಂದು ವಿಷವರ್ತುಲ. ಇದನ್ನು ನಿವಾರಿಸಲು ಅಣ್ಣಾ ಹಜಾರೆ, ಸಂತೋಷ ಹೆಗ್ಡೆ ಅಂಥವರು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೂ ನಿರೀಕ್ಷಿತ ಫಲ ದೊರೆತಿಲ್ಲ ಎಂಬುದು ವಿಷಾದದ ಸಂಗತಿ.