ಬೆರಳೆಣಿಕೆಯಷ್ಟು ಸಂಸದರನ್ನು ಹೊರತುಪಡಿಸಿದರೆ ಎಲ್ಲರೂ ಕೋಟ್ಯಧೀಶರೇ ಆಗಿದ್ದಾರೆ. ಅಂತಹವರಿಗೆ ಈ ರೀತಿಯ ಸಬ್ಸಿಡಿಗಳ ಅಗತ್ಯವೇ ಇಲ್ಲ. ಕೇವಲ ಇದೊಂದೇ ಅಲ್ಲದೆ ಕಾರು, ಪೆಟ್ರೋಲ್, ಪ್ರವಾಸ ಭತ್ಯೆ ಸೇರಿದಂತೆ ಹಲವು ಸವಲತ್ತುಗಳನ್ನು ಅವರು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ಮಾನ್ಯವಾದರೂ ಅನೇಕವು ಅರ್ಥಹೀನ ಅಥವಾ ಅನಗತ್ಯ ಎನಿಸುತ್ತದೆ. ಇಂತಹವಕ್ಕೆ ಕಡಿವಾಣ ಹಾಕಿ, ಅದೇ ಹಣವನ್ನು ಅಭಿವೃದ್ಧಿಗೋ ಅಥವಾ ಕಡುಬಡವರ ಏಳಿಗೆಗೋ ಬಳಸಿದರೆ ತೆರಿಗೆ ಕಟ್ಟಿದವರಿಗೆ ನೆಮ್ಮದಿಯ ಭಾವ ಮೂಡಬಹುದು.