ನೆಮ್ಮದಿಯ ಏಕಮಾತ್ರ ತಾಣಗಳಾದ ದೇವಾಲಯಗಳೂ ಜಾತಿ, ರಾಜಕೀಯದ ಅಖಾಡಗಳಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ದೇವಾಲಯಗಳು ಸರ್ಕಾರದ ಹಿಡಿತದಲ್ಲೇ ಇದ್ದು, ಅವುಗಳಿಂದ ಬರುವ ವರಮಾನವನ್ನು ಅವುಗಳ ಅಭಿವೃದ್ಧಿ ಹಾಗೂ ಸಮಾಜ ಸೇವಾ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ನೀತಿಯನ್ನು ರೂಪಿಸುವುದು ಇದಕ್ಕೆ ಸೂಕ್ತ ಪರಿಹಾರವಾಗಬಲ್ಲದು.