ನಿರಪರಾಧಿಗಳ ಮೇಲೆ ನಡೆಯುವ ಈ ದೌರ್ಜನ್ಯಕ್ಕೆ ಕಾರಣವಾಗಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟ ಹಾಕಲೇಬೇಕು. ಈವರೆಗಿನ ವಿಧ್ವಂಸಕ ಕೃತ್ಯಗಳನ್ನು ನೋಡಿದರೆ, ದೇಶದ ಕಾನೂನಿಗೆ ಭಯೋತ್ಪಾದಕರು ಕವಡೆಕಾಸಿನ ಕಿಮ್ಮತ್ತನ್ನೂ ಕೊಟ್ಟಿಲ್ಲದಿರುವುದು ಅರಿವಿಗೆ ಬರುತ್ತದೆ. ಕಾನೂನಿನ ಭಯ ಅವರಲ್ಲಿ ಮೂಡಬೇಕು. ದೇಶದ್ರೋಹಿಗಳಿಗೆ ಯಾವುದೇ ರೀತಿಯ ರಿಯಾಯಿತಿ ತೋರಿಸದೆ ಬಗ್ಗುಬಡಿಯಬೇಕಿದೆ. ಪರೋಕ್ಷವಾಗಿ ಇವರಿಗೆ ನೆರವಾಗುವ ಸ್ಥಳೀಯರ ವಿರುದ್ಧ ಕಾನೂನಿನ ಅನ್ವಯ ಕ್ರಮ ಜರುಗಿಸಲಿ.