ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಜೀವನಾಧಾರಿತ ಮಹಾನಾಯಕ ಧಾರಾವಾಹಿಗೆ ಬೆದರಿಕೆ ಕರೆ ದುರದೃಷ್ಟಕರ

Last Updated 6 ಸೆಪ್ಟೆಂಬರ್ 2020, 17:02 IST
ಅಕ್ಷರ ಗಾತ್ರ

ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನಗಾಥೆಯನ್ನು ಒಳಗೊಂಡ ‘ಮಹಾನಾಯಕ’ ಧಾರಾವಾಹಿಯ ಪ್ರಸಾರ ನಿಲ್ಲಿಸುವಂತೆ ತಮಗೆ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಜೀ ವಾಹಿನಿಯ ಬ್ಯುಸಿನೆಸ್ ಹೆಡ್ ಹೇಳಿರುವುದಾಗಿ ವರದಿಯಾಗಿದೆ. ಈ ಸುದ್ದಿ ಓದಿ, ಜಾತಿ ಎಂಬ ಸಂಕುಚಿತ ಭಾವನೆಯನ್ನು ತಲೆಯಲ್ಲಿ ತುಂಬಿಕೊಂಡ ಹೀನ ಮನಃಸ್ಥಿತಿಗಳು ಇನ್ನೂ ಬದಲಾಗಲಿಲ್ಲವಲ್ಲಾ ಎನಿಸಿ ತುಂಬಾ ಬೇಸರವಾಯಿತು.

ಇಂತಹವುಗಳ ಹಿಂದೆ ಇರುವವರು ಯಾವುದೇ ಸಂಗತಿಯನ್ನು ತೆರೆದ ಮನಸ್ಸಿನಿಂದ ನೋಡುವ ಹೃದಯ ವೈಶಾಲ್ಯ, ನಿರ್ಮಲ ಮನಸ್ಸು ಹೊಂದಲಿ. ಮನೆಯೊಡೆದು ಮನಸ್ಸಿನ ಸ್ವಾಸ್ಥ್ಯ ಹಾಳು ಮಾಡುವಂತಹ ಅನೇಕ ಧಾರಾವಾಹಿಗಳ ನಡುವೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಸಾಧಕರಿಗೆ ಸ್ಫೂರ್ತಿ ತುಂಬುವ ‘ಮಹಾನಾಯಕ’ ಅಂತಹ ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡುತ್ತಿರುವ ಜೀ ವಾಹಿನಿಗೆ ಅಭಿನಂದನೆ.

– ಮಂಜುನಾಥ್ ಟಿ.ಎಸ್.,ತರುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT