ಇಂದಿಗೂ ಎಷ್ಟೋ ಮಂದಿ ಚಾಲನಾ ಪರವಾನಗಿ (ಡಿ.ಎಲ್) ಮಾಡಿಸಿಕೊಳ್ಳಲಾಗದ ಸ್ಥಿತಿ ಇದೆ. ಸಾರಿಗೆ ಇಲಾಖೆಯಲ್ಲಿರುವ ಭ್ರಷ್ಟತೆ, ಹತ್ತಾರು ಸಲ ಅಲೆಯಬೇಕಾದ ಸ್ಥಿತಿ, ಉಸಿರು ಕಟ್ಟಿಸುವ ಆಡಳಿತ ನೀತಿಯೇ ಇದಕ್ಕೆಲ್ಲ ಕಾರಣ. ಡಿ.ಎಲ್ ಪಡೆಯಲು ನಿಯಮಗಳನ್ನು ಬಿಗಿಗೊಳಿಸಲಿ. ಆದರೆ, ಆ ನಿಯಮಗಳನ್ನು ಪಾಲಿಸುವವರಿಗೆ ಸುಲಭವಾಗಿ ಡಿ.ಎಲ್ ದೊರೆಯುವಂತೆ ಮಾಡಬೇಕು. ಪರೀಕ್ಷೆಗೆ ಒಳಪಡಿಸಿ,ಸ್ಥಳದಲ್ಲೇ ಅದನ್ನು ಮಾಡಿಸಿಕೊಡುವ ವ್ಯವಸ್ಥೆ ಮಾಡಲಿ. ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಸಾರುವ ಆಂದೋಲನಗಳು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿ. ನಿಯಮಗಳಿಗೆ ಬದ್ಧರಾಗಿರುವಂತೆಜನರನ್ನು ಅಣಿಗೊಳಿಸುವುದು ಕೂಡ ಸರ್ಕಾರದ ಮಹತ್ವದ ಕೆಲಸಗಳಲ್ಲಿ ಒಂದು.