<p>ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆಯಲು ಕೇಂದ್ರ ಸರ್ಕಾರ ಹೊಸ ಸಾರಿಗೆ ನೀತಿ ಜಾರಿಗೊಳಿಸಿರುವುದೇನೋ ಸರಿ. ದಂಡ ಹೆಚ್ಚಿಸಿರುವುದರ ಪರವಾಗಿ ಹಾಗೂ ವಿರುದ್ಧವಾಗಿ ಚರ್ಚೆಗಳು ನಡೆಯುತ್ತಿವೆ. ದಂಡವೊಂದರಿಂದಲೇ ಎಲ್ಲವನ್ನೂ ಸರಿಪಡಿಸಲು, ಶಿಸ್ತು ಮೂಡಿಸಲು ಸಾಧ್ಯವಿಲ್ಲ. ದಂಡದ ಜೊತೆಗೆ ಸ್ನೇಹಮಯಿ ನೀತಿಯೂ ಬೇಕು.</p>.<p>ಇಂದಿಗೂ ಎಷ್ಟೋ ಮಂದಿ ಚಾಲನಾ ಪರವಾನಗಿ (ಡಿ.ಎಲ್) ಮಾಡಿಸಿಕೊಳ್ಳಲಾಗದ ಸ್ಥಿತಿ ಇದೆ. ಸಾರಿಗೆ ಇಲಾಖೆಯಲ್ಲಿರುವ ಭ್ರಷ್ಟತೆ, ಹತ್ತಾರು ಸಲ ಅಲೆಯಬೇಕಾದ ಸ್ಥಿತಿ, ಉಸಿರು ಕಟ್ಟಿಸುವ ಆಡಳಿತ ನೀತಿಯೇ ಇದಕ್ಕೆಲ್ಲ ಕಾರಣ. ಡಿ.ಎಲ್ ಪಡೆಯಲು ನಿಯಮಗಳನ್ನು ಬಿಗಿಗೊಳಿಸಲಿ. ಆದರೆ, ಆ ನಿಯಮಗಳನ್ನು ಪಾಲಿಸುವವರಿಗೆ ಸುಲಭವಾಗಿ ಡಿ.ಎಲ್ ದೊರೆಯುವಂತೆ ಮಾಡಬೇಕು. ಪರೀಕ್ಷೆಗೆ ಒಳಪಡಿಸಿ,ಸ್ಥಳದಲ್ಲೇ ಅದನ್ನು ಮಾಡಿಸಿಕೊಡುವ ವ್ಯವಸ್ಥೆ ಮಾಡಲಿ. ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಸಾರುವ ಆಂದೋಲನಗಳು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿ. ನಿಯಮಗಳಿಗೆ ಬದ್ಧರಾಗಿರುವಂತೆಜನರನ್ನು ಅಣಿಗೊಳಿಸುವುದು ಕೂಡ ಸರ್ಕಾರದ ಮಹತ್ವದ ಕೆಲಸಗಳಲ್ಲಿ ಒಂದು.</p>.<p><strong>–ಬಲ್ಲೇನಹಳ್ಳಿ ಮಂಜುನಾಥ್,</strong>ಕೆ.ಆರ್.ಪೇಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆಯಲು ಕೇಂದ್ರ ಸರ್ಕಾರ ಹೊಸ ಸಾರಿಗೆ ನೀತಿ ಜಾರಿಗೊಳಿಸಿರುವುದೇನೋ ಸರಿ. ದಂಡ ಹೆಚ್ಚಿಸಿರುವುದರ ಪರವಾಗಿ ಹಾಗೂ ವಿರುದ್ಧವಾಗಿ ಚರ್ಚೆಗಳು ನಡೆಯುತ್ತಿವೆ. ದಂಡವೊಂದರಿಂದಲೇ ಎಲ್ಲವನ್ನೂ ಸರಿಪಡಿಸಲು, ಶಿಸ್ತು ಮೂಡಿಸಲು ಸಾಧ್ಯವಿಲ್ಲ. ದಂಡದ ಜೊತೆಗೆ ಸ್ನೇಹಮಯಿ ನೀತಿಯೂ ಬೇಕು.</p>.<p>ಇಂದಿಗೂ ಎಷ್ಟೋ ಮಂದಿ ಚಾಲನಾ ಪರವಾನಗಿ (ಡಿ.ಎಲ್) ಮಾಡಿಸಿಕೊಳ್ಳಲಾಗದ ಸ್ಥಿತಿ ಇದೆ. ಸಾರಿಗೆ ಇಲಾಖೆಯಲ್ಲಿರುವ ಭ್ರಷ್ಟತೆ, ಹತ್ತಾರು ಸಲ ಅಲೆಯಬೇಕಾದ ಸ್ಥಿತಿ, ಉಸಿರು ಕಟ್ಟಿಸುವ ಆಡಳಿತ ನೀತಿಯೇ ಇದಕ್ಕೆಲ್ಲ ಕಾರಣ. ಡಿ.ಎಲ್ ಪಡೆಯಲು ನಿಯಮಗಳನ್ನು ಬಿಗಿಗೊಳಿಸಲಿ. ಆದರೆ, ಆ ನಿಯಮಗಳನ್ನು ಪಾಲಿಸುವವರಿಗೆ ಸುಲಭವಾಗಿ ಡಿ.ಎಲ್ ದೊರೆಯುವಂತೆ ಮಾಡಬೇಕು. ಪರೀಕ್ಷೆಗೆ ಒಳಪಡಿಸಿ,ಸ್ಥಳದಲ್ಲೇ ಅದನ್ನು ಮಾಡಿಸಿಕೊಡುವ ವ್ಯವಸ್ಥೆ ಮಾಡಲಿ. ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಸಾರುವ ಆಂದೋಲನಗಳು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿ. ನಿಯಮಗಳಿಗೆ ಬದ್ಧರಾಗಿರುವಂತೆಜನರನ್ನು ಅಣಿಗೊಳಿಸುವುದು ಕೂಡ ಸರ್ಕಾರದ ಮಹತ್ವದ ಕೆಲಸಗಳಲ್ಲಿ ಒಂದು.</p>.<p><strong>–ಬಲ್ಲೇನಹಳ್ಳಿ ಮಂಜುನಾಥ್,</strong>ಕೆ.ಆರ್.ಪೇಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>