ಮುಷ್ಕರದಿಂದ ಓಡಾಟಕ್ಕೆ ಸಂಚಕಾರವಾಗಿರುವ ಸುದ್ದಿಯನ್ನು (ಪ್ರ.ವಾ., ಏ. 7) ಓದಿ ಆತಂಕವಾಯಿತು. ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಆಗಬೇಕೆಂದು ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದೇನೊ ಸರಿ. ಆದರೆ ನಗರ ಮತ್ತು ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳಿಗೆ ತೆರಳಬೇಕಾದರೆ ಬಸ್ಸನ್ನೇ ಅವಲಂಬಿಸಿರುವುದರಿಂದ ಸಾರಿಗೆ ನೌಕರರ ಮುಷ್ಕರದಿಂದ ಗೈರುಹಾಜರಾಗಬೇಕಾಗಿರುವುದು ಬೇಸರದ ಸಂಗತಿ. ಬಸ್ ಪಾಸ್ ಶುಲ್ಕವನ್ನು ತುಂಬಿದರೂ ದುಡ್ಡು ಕೊಟ್ಟು ಖಾಸಗಿ ವಾಹನದಲ್ಲಿ ಹೋಗಬೇಕಾಗಿದೆ.