ಸರ್ಕಾರಿ ಒಡೆತನದ ಜಮೀನು , ಕೆರೆಗಳನ್ನು ರೈತರು ಕೆಲವೆಡೆ ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿರುತ್ತಾರೆ. ಇಂತಹ ಒತ್ತುವರಿಯನ್ನು ತೆರವು ಮಾಡಿಸಲು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವುದು ಸಹಜ. ಆದರೆ ಈ ಸಂದರ್ಭದಲ್ಲಿ, ಅಲ್ಲಿ ಸೊಂಪಾಗಿ ಬೆಳೆದಿರುವ ಅಡಿಕೆ, ತೆಂಗು ಮುಂತಾದ ಮರಗಳನ್ನು ಕಡಿಯುವ ಬದಲು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಮರ– ಗಿಡಗಳನ್ನು ಕಡಿದು ಪರಿಸರ ಹಾಳು ಮಾಡದಿರಲಿ.