<p>ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಹಲವು ವರ್ಷಗಳಿಂದ ಬಳಸದೇ ನಿಲ್ಲಿಸಿರುವ ವಾಹನಗಳನ್ನು ಜಪ್ತಿ ಮಾಡಿ ಗುಜರಿಗೆ ಹಾಕುವ ಗೃಹ ಸಚಿವರ ನಿರ್ಧಾರ ಶ್ಲಾಘನೀಯ (ಪ್ರ.ವಾ., ಫೆ. 2). ಜಪ್ತಿ ಮಾಡುವುದಕ್ಕೆ ಮುಂಚೆ ಅಂತಹ ವಾಹನಗಳ ಮಾಲೀಕರಿಗೆ 6 ತಿಂಗಳ ಸಮಯಾವಕಾಶ ನೀಡುವುದಾಗಿ ಅವರು ತಿಳಿಸಿದ್ದಾರೆ.</p>.<p>ವರ್ಷಾನುಗಟ್ಟಲೆ ವಾಹನಗಳನ್ನು ಬಳಸದೇ ನಿಲ್ಲಿಸಿದವರಿಗೆ 6 ತಿಂಗಳ ಸಮಯಾವಕಾಶ ನೀಡುವುದರಲ್ಲಿ ಅರ್ಥವಿಲ್ಲ. ಕೇವಲ 15-30 ದಿನಗಳ ಸಮಯಾವಕಾಶ ನೀಡುವುದು ಸೂಕ್ತ. ಅಲ್ಲದೆ ಅಂತಹ ವಾಹನಗಳ ಮಾಲೀಕರಿಗೆ ದಂಡ ಹಾಕುವುದಲ್ಲದೆ ಅವುಗಳನ್ನು ಅಲ್ಲಿಂದ ಸಾಗಿಸುವ ಖರ್ಚನ್ನೂ ಅವರಿಂದಲೇ ವಸೂಲು<br />ಮಾಡುವುದು ಸೂಕ್ತ.</p>.<p>ಇದರೊಂದಿಗೆ, ವಿವಿಧ ಅಪರಾಧಗಳಲ್ಲಿ ಭಾಗಿಯಾದವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ನಗರದ ಹಲವಾರು ಪೊಲೀಸ್ ಠಾಣೆಗಳ ಹತ್ತಿರ ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗಗಳಲ್ಲಿ ನಿಲ್ಲಿಸಿರುವುದು ಸರ್ವೇ ಸಾಮಾನ್ಯವಾಗಿದೆ. ಇವುಗಳಿಂದ ಸಹ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇಂತಹವುಗಳನ್ನು ಕೂಡ ಕಾನೂನುಬದ್ಧವಾಗಿ ಆಗಿಂದಾಗ್ಗೆ ವಿಲೇವಾರಿ ಮಾಡುವ ಬಗ್ಗೆ ಹಾಗೂ ಇವುಗಳಿಗಾಗಿಯೇ ಪ್ರತ್ಯೇಕವಾದ ಜಾಗ ನಿಗದಿ ಮಾಡುವ ಬಗ್ಗೆ ಸಹ ಚಿಂತನೆ ಮಾಡುವುದು ಅತ್ಯವಶ್ಯಕ.</p>.<p><strong>ಕೆ.ಪ್ರಭಾಕರ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಹಲವು ವರ್ಷಗಳಿಂದ ಬಳಸದೇ ನಿಲ್ಲಿಸಿರುವ ವಾಹನಗಳನ್ನು ಜಪ್ತಿ ಮಾಡಿ ಗುಜರಿಗೆ ಹಾಕುವ ಗೃಹ ಸಚಿವರ ನಿರ್ಧಾರ ಶ್ಲಾಘನೀಯ (ಪ್ರ.ವಾ., ಫೆ. 2). ಜಪ್ತಿ ಮಾಡುವುದಕ್ಕೆ ಮುಂಚೆ ಅಂತಹ ವಾಹನಗಳ ಮಾಲೀಕರಿಗೆ 6 ತಿಂಗಳ ಸಮಯಾವಕಾಶ ನೀಡುವುದಾಗಿ ಅವರು ತಿಳಿಸಿದ್ದಾರೆ.</p>.<p>ವರ್ಷಾನುಗಟ್ಟಲೆ ವಾಹನಗಳನ್ನು ಬಳಸದೇ ನಿಲ್ಲಿಸಿದವರಿಗೆ 6 ತಿಂಗಳ ಸಮಯಾವಕಾಶ ನೀಡುವುದರಲ್ಲಿ ಅರ್ಥವಿಲ್ಲ. ಕೇವಲ 15-30 ದಿನಗಳ ಸಮಯಾವಕಾಶ ನೀಡುವುದು ಸೂಕ್ತ. ಅಲ್ಲದೆ ಅಂತಹ ವಾಹನಗಳ ಮಾಲೀಕರಿಗೆ ದಂಡ ಹಾಕುವುದಲ್ಲದೆ ಅವುಗಳನ್ನು ಅಲ್ಲಿಂದ ಸಾಗಿಸುವ ಖರ್ಚನ್ನೂ ಅವರಿಂದಲೇ ವಸೂಲು<br />ಮಾಡುವುದು ಸೂಕ್ತ.</p>.<p>ಇದರೊಂದಿಗೆ, ವಿವಿಧ ಅಪರಾಧಗಳಲ್ಲಿ ಭಾಗಿಯಾದವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ನಗರದ ಹಲವಾರು ಪೊಲೀಸ್ ಠಾಣೆಗಳ ಹತ್ತಿರ ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗಗಳಲ್ಲಿ ನಿಲ್ಲಿಸಿರುವುದು ಸರ್ವೇ ಸಾಮಾನ್ಯವಾಗಿದೆ. ಇವುಗಳಿಂದ ಸಹ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇಂತಹವುಗಳನ್ನು ಕೂಡ ಕಾನೂನುಬದ್ಧವಾಗಿ ಆಗಿಂದಾಗ್ಗೆ ವಿಲೇವಾರಿ ಮಾಡುವ ಬಗ್ಗೆ ಹಾಗೂ ಇವುಗಳಿಗಾಗಿಯೇ ಪ್ರತ್ಯೇಕವಾದ ಜಾಗ ನಿಗದಿ ಮಾಡುವ ಬಗ್ಗೆ ಸಹ ಚಿಂತನೆ ಮಾಡುವುದು ಅತ್ಯವಶ್ಯಕ.</p>.<p><strong>ಕೆ.ಪ್ರಭಾಕರ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>