ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಕಷ್ಟ ಅರ್ಥವಾಗದು

Last Updated 30 ಜನವರಿ 2020, 19:45 IST
ಅಕ್ಷರ ಗಾತ್ರ

1961ರಲ್ಲಿ ಸರ್ಕಾರ ತಮಗೆ ಮಂಜೂರು ಮಾಡಿದ್ದ ನಾಲ್ಕು ಎಕರೆ ಜಮೀನಿನ ಪತ್ತೆಗಾಗಿ 81 ವರ್ಷದ ವೃದ್ಧರೊಬ್ಬರು 15 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿರುವ ಪರಿ (ಪ್ರ.ವಾ., ಜ. 29) ನೋಡುಗರಲ್ಲಿ ಕಣ್ಣೀರು ತರಿಸುವಂತಿದೆ. ರಾಜ್ಯದಲ್ಲಿ ಇಂತಹ ಸ್ಥಿತಿ ಕೇವಲ ಈ ವೃದ್ಧರೊಬ್ಬರಿಗೆ ಇಲ್ಲ. ಅನೇಕ ವಿಧವೆಯರು, ವಯಸ್ಸಾದವರು, ನಿವೃತ್ತ ನೌಕರರು, ಸೈನಿಕರು ಮಾಸಾಶನಕ್ಕಾಗಿ, ಪಿಂಚಣಿಗಾಗಿ ದಿನನಿತ್ಯವೂ ಅಲೆದಾಡುತ್ತಿರುತ್ತಾರೆ. ಅಧಿಕಾರಿಗಳಿಗೆ ಇವರ ಕಷ್ಟ ಅರ್ಥವಾಗದು. ಕಾಂಚಾಣ ಇದ್ದವರಿಗೆ ಮಾತ್ರ ಕೆಲಸಗಳು ಸರಿಯಾದ ಸಮಯಕ್ಕೆ ಆಗುತ್ತವೆ. ಕಾಂಚಾಣ ಇಲ್ಲದವರ ಗೋಳು ಕೇಳುವವರು ಯಾರು?

- ಡಾ. ಶಿವರಾಜ ಯತಗಲ್,ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT