ನಿಷ್ಕಲ್ಮಶ ಗುಣ, ವಾತ್ಸಲ್ಯಮಯಿ, ಮಾತೃಹೃದಯಿ ಸಾಲುಮರದ ತಿಮ್ಮಕ್ಕ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಹಣೆಮುಟ್ಟಿ ಹರಸಿದಳು. ರಾಷ್ಟ್ರಪತಿ, ಶಿಷ್ಟಾಚಾರವನ್ನು ಬದಿಗೊತ್ತಿ ವಿನಯದಿಂದ ತಲೆಬಾಗಿ ಆಶೀರ್ವಾದವನ್ನು ಸ್ವೀಕರಿಸಿದರು. ದೇಶದ ಉದ್ದಗಲದಿಂದ ಬಂದು ಆಸೀನರಾಗಿದ್ದ ಸಭಾಸದರು ಹರ್ಷಿತರಾಗಿ ಚಪ್ಪಾಳೆ ತಟ್ಟಿದರು.