ಬಿಜೆಪಿಯ ಯುವ ಸಂಸದ ವರುಣ್ ಗಾಂಧಿ ತಮ್ಮದೇ ಪಕ್ಷದ ವಿರುದ್ಧ ಧ್ವನಿಯೆತ್ತಿದ್ದಾರೆ. ಖಾಲಿ ಇರುವ 60 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ತುಂಬದೇ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುವಕರ ಬಗೆಗಿನ ಅವರ ಕಾಳಜಿಯ ಬಗ್ಗೆ ಸಂತೋಷವಾಯಿತು. ಆಡಳಿತಾರೂಢ ಪಕ್ಷದ ಪ್ರಣಾಳಿಕೆಗೆ ಮನಸೋತು ಯುವಕರೇ ಹೆಚ್ಚಾಗಿ ಆ ಪಕ್ಷಕ್ಕೆ ಮತ ಹಾಕಿದರು. ಆದರೆ ಸರ್ಕಾರದ ಸೇವೆ ಮಾಡಬೇಕೆಂಬ ಅವರ ಆಸೆಗೆ ಪುಷ್ಟಿ ದೊರೆತಿಲ್ಲ ಎಂಬುದು ವರುಣ್ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಕಾನೂನು ತೊಡಕುಗಳಿವೆಯೇ? ಖಾಸಗೀಕರಣ ಮಾಡುವ ಉದ್ದೇಶವಿದೆಯೇ ಅಥವಾ ಅಷ್ಟು ಜನರಿಗೆ ಸಂಬಳ ಕೊಡಲು ಖಜಾನೆಯಲ್ಲಿ ಹಣವಿಲ್ಲವೇ?