<p>‘ಕಾಳಾರಾಮನಿಂದ ಅಯೋಧ್ಯಾರಾಮನವರೆಗೆ’ ಎಂಬ ಲೇಖನದಲ್ಲಿ (ಸಂಗತ, ಆ. 6), ಡಾ. ಅಂಬೇಡ್ಕರ್ ಅವರು ಕಾಳಾರಾಮ ಮಂದಿರ ಪ್ರವೇಶಕ್ಕಾಗಿ ನಡೆಸಿದ ಚಳವಳಿಗೆ ಲೇಖಕ ವಾದಿರಾಜ ಅವರು ಕೊಟ್ಟಿರುವ ಕಾರಣ ಸತ್ಯಕ್ಕೆ ದೂರವಾಗಿದೆ. ವಾಲ್ಮೀಕಿ ವಿರಚಿತ ರಾಮಾಯಣವನ್ನು ಲೇಖಕರು ತಮ್ಮ ಮೂಗಿನ ನೇರಕ್ಕೆ ಎಷ್ಟು ಬೇಕೋ ಅಷ್ಟನ್ನು ಆಯ್ದುಕೊಂಡು ಓದುಗರ ಮನಸ್ಸು ಕದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಂಬೇಡ್ಕರ್ ಅವರೇ ಬರೆದಿರುವ ‘ಹಿಂದೂ ಧರ್ಮದ ಒಗಟುಗಳು’ ಎಂಬ ಗ್ರಂಥದಲ್ಲಿ ರಾಮ– ಕೃಷ್ಣರ ಬಗೆಗಿನ ಅವರ ನಿಲುವುಗಳನ್ನು ತಿಳಿದುಕೊಳ್ಳದೆ, ಡಾ. ಶಂಕರರಾವ್ ಕಾರತ್ ಅವರ ಪುಸ್ತಕದಲ್ಲಿ ದಾಖಲಾದ ಅಂಶಗಳನ್ನಷ್ಟೇ ಎತ್ತಿ ತೋರಿಸಲು ಹೊರಟಿದ್ದು ಯಾಕೆ?</p>.<p>‘ಕಾಳಾರಾಮ ಮಂದಿರ ಪ್ರವೇಶಿಸಿದ ಮಾತ್ರಕ್ಕೆ ನಾನಾಗಲೀ ನನ್ನ ಸಮುದಾಯವಾಗಲೀ ಶೈಕ್ಷಣಿಕವಾಗಿ, ಆರ್ಥಿಕವಾಗಿ ಉದ್ಧಾರ ಆಗುತ್ತದೆ ಎಂಬ ಭ್ರಮೆ ಅಥವಾ ದೈವಿಕ ನಂಬಿಕೆ ನನಗಿಲ್ಲ. ಆದರೆ, ಸಾಮಾಜಿಕ ಸಮಾನತೆ ಸಾಧಿಸುವುದೇ ಈ ಚಳವಳಿಯ ಮುಖ್ಯ ಉದ್ದೇಶ’ ಎಂದು ಹೇಳಿದ ಅಂಬೇಡ್ಕರ್ ಅವರ ಸಂದೇಶವನ್ನು ಮರೆಮಾಚಿದ್ದರ ಔಚಿತ್ಯವೇನು?<br /><br /><em><strong>-ಟಿ.ಶಶಿಧರ, ರಸ್ತಾಪುರ, ಶಹಾಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕಾಳಾರಾಮನಿಂದ ಅಯೋಧ್ಯಾರಾಮನವರೆಗೆ’ ಎಂಬ ಲೇಖನದಲ್ಲಿ (ಸಂಗತ, ಆ. 6), ಡಾ. ಅಂಬೇಡ್ಕರ್ ಅವರು ಕಾಳಾರಾಮ ಮಂದಿರ ಪ್ರವೇಶಕ್ಕಾಗಿ ನಡೆಸಿದ ಚಳವಳಿಗೆ ಲೇಖಕ ವಾದಿರಾಜ ಅವರು ಕೊಟ್ಟಿರುವ ಕಾರಣ ಸತ್ಯಕ್ಕೆ ದೂರವಾಗಿದೆ. ವಾಲ್ಮೀಕಿ ವಿರಚಿತ ರಾಮಾಯಣವನ್ನು ಲೇಖಕರು ತಮ್ಮ ಮೂಗಿನ ನೇರಕ್ಕೆ ಎಷ್ಟು ಬೇಕೋ ಅಷ್ಟನ್ನು ಆಯ್ದುಕೊಂಡು ಓದುಗರ ಮನಸ್ಸು ಕದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಂಬೇಡ್ಕರ್ ಅವರೇ ಬರೆದಿರುವ ‘ಹಿಂದೂ ಧರ್ಮದ ಒಗಟುಗಳು’ ಎಂಬ ಗ್ರಂಥದಲ್ಲಿ ರಾಮ– ಕೃಷ್ಣರ ಬಗೆಗಿನ ಅವರ ನಿಲುವುಗಳನ್ನು ತಿಳಿದುಕೊಳ್ಳದೆ, ಡಾ. ಶಂಕರರಾವ್ ಕಾರತ್ ಅವರ ಪುಸ್ತಕದಲ್ಲಿ ದಾಖಲಾದ ಅಂಶಗಳನ್ನಷ್ಟೇ ಎತ್ತಿ ತೋರಿಸಲು ಹೊರಟಿದ್ದು ಯಾಕೆ?</p>.<p>‘ಕಾಳಾರಾಮ ಮಂದಿರ ಪ್ರವೇಶಿಸಿದ ಮಾತ್ರಕ್ಕೆ ನಾನಾಗಲೀ ನನ್ನ ಸಮುದಾಯವಾಗಲೀ ಶೈಕ್ಷಣಿಕವಾಗಿ, ಆರ್ಥಿಕವಾಗಿ ಉದ್ಧಾರ ಆಗುತ್ತದೆ ಎಂಬ ಭ್ರಮೆ ಅಥವಾ ದೈವಿಕ ನಂಬಿಕೆ ನನಗಿಲ್ಲ. ಆದರೆ, ಸಾಮಾಜಿಕ ಸಮಾನತೆ ಸಾಧಿಸುವುದೇ ಈ ಚಳವಳಿಯ ಮುಖ್ಯ ಉದ್ದೇಶ’ ಎಂದು ಹೇಳಿದ ಅಂಬೇಡ್ಕರ್ ಅವರ ಸಂದೇಶವನ್ನು ಮರೆಮಾಚಿದ್ದರ ಔಚಿತ್ಯವೇನು?<br /><br /><em><strong>-ಟಿ.ಶಶಿಧರ, ರಸ್ತಾಪುರ, ಶಹಾಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>