ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ವರ್ಷವೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಪ್ರತಿವರ್ಷ ಅತ್ಯಂತ ಕಳಪೆ ಫಲಿತಾಂಶ ತೋರುತ್ತಿರುವ ಯಾದಗಿರಿಯನ್ನು ಈವರೆಗೆ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸದೇ ಇರುವುದಕ್ಕೆ ಕಾರಣವೇನು? ಇಂತಹ ಸ್ಥಿತಿಗೆ ಯಾರು ಹೊಣೆ? ಶಿಕ್ಷಕರೇ, ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳೇ ಅಥವಾ ರಾಜ್ಯ ಸರ್ಕಾರವೇ? ಒಟ್ಟಿನಲ್ಲಿ, ಎಲ್ಲರೂ ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.