ವಿವಿಧ ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದು ಕನಿಷ್ಠ ದರದಲ್ಲಿ (1 ರೂ) ಅಕ್ಕಿ ಕೊಡು ವುದಾಗಿ ಘೋಷಿಸಿದ್ದವು. ಹೊಸ ಸರ್ಕಾರ ಈಗ ಅನುಷ್ಠಾನಕ್ಕೆ ಮುಂದಾಗಿದೆ. ಬೊಕ್ಕಸದ ನಷ್ಟ ಸರಿದೂಗಿಸಲು ಹೆಣಗಾಡುತ್ತಿದೆ. ಅಕ್ಕಿ ಎಲ್ಲರಿಗೂ ಮುಖ್ಯ ಆಹಾರವಲ್ಲ. ಉತ್ತರ ಕರ್ನಾಟಕದಲ್ಲಿ ಜೋಳ, ಹಳೇ ಮೈಸೂರು ಭಾಗದಲ್ಲಿ ರಾಗಿ, ಕರಾವಳಿಯಲ್ಲಿ ಕುಚಲಕ್ಕಿ ಮುಖ್ಯ ಆಹಾರ. ಜೋಳ, ರಾಗಿ, ಗೋಧಿಯೊಂದಿಗೆ ಬೇಳೆಕಾಳು ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವಂತೆ ಮಾಡಲಿ.