<p>ತಮ್ಮ ಪತ್ರಿಕೆಯ ಸಂಪಾದಕೀಯ ಲೇಖನ `ಆತ್ಮಾವಲೋಕನ ಮಾಡಿಕೊಳ್ಳಿ~ ಸಮಂಜಸವಾಗಿದೆ. ಅಣ್ಣಾ ಹಜಾರೆಯವರ `ಭ್ರಷ್ಟಾಚಾರ ವಿರುದ್ಧ ಭಾರತ~ ಹೂಡಿರುವ ಸತ್ಯಾಗ್ರಹವನ್ನು ತಾವು ತಿಳಿಸಿರುವಂತೆ ರಾಜಕಾರಣಿಗಳನ್ನು ಹೊರತುಪಡಿಸಿ ದೇಶದ ಸಮಸ್ತ ಜನಸಮುದಾಯ ಸ್ವಾಗತಿಸುತ್ತದೆ. <br /> <br /> ಚಳವಳಿಗೆ ಇತ್ತೀಚೆಗೆ ಮೊದಲು ಸೇರುತ್ತಿದ್ದಷ್ಟು ಜನ ಸೇರುತ್ತಿಲ್ಲ. ಅದಕ್ಕೆ ಕಾರಣ ಚಳವಳಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ನಿಮ್ಮ ಅಭಿಪ್ರಾಯ. ಅದಲ್ಲ ಕಾರಣ ಎಂದು ನಾನು ತಿಳಿಸ ಬಯಸುತ್ತೇನೆ.<br /> <br /> ಸರ್ಕಾರದ ಭ್ರಷ್ಟಾಚಾರ ತಾರಕಕ್ಕೆ ಏರಿದೆ. ಅದಕ್ಕಾಗಿ ಕೂಡಲೇ ಲೋಕಪಾಲ್ ಮಸೂದೆಯನ್ನು ಸರ್ಕಾರ ಲೋಕಸಭೆಯ ಮುಂದಿಟ್ಟು ಅದಕ್ಕೆ ಅಂಗೀಕಾರ ಪಡೆಯಬೇಕೆಂದು ಅಣ್ಣಾ ಹಜಾರೆ ಒತ್ತಾಯ ತರಲು ಹೋರಾಟ ಹೂಡಿದರು. ಭಾರತದ ಎಲ್ಲ ಪ್ರಜೆಗಳ ಮನಸ್ಸಿನಲ್ಲಿಯೂ ಸರ್ಕಾರದ ಭ್ರಷ್ಟಾಚಾರದ ಬಗೆಗೆ ಕುದಿತ ಇತ್ತು.<br /> <br /> ಅಣ್ಣಾ ಹಜಾರೆಯವರ ಈ ಚಳವಳಿ ಭಾರತೀಯರೆಲ್ಲರನ್ನೂ ಬಡಿದೆಬ್ಬಿಸಿತು. ಅಣ್ಣಾ ಹಜಾರೆ ದೆಹಲಿಯಲ್ಲಿ ಚಳವಳಿಗೆ ಚಾಲನೆ ಕೊಟ್ಟ ಕೂಡಲೇ ಭಾರತದ ಉದ್ದಗಲಕ್ಕೂ ಜನಾಂದೋಲನ ಭುಗಿಲೆದ್ದಿತು. ಹೋರಾಟದ ಪೂರ್ಣ ಕಲ್ಪನೆ ಇಲ್ಲದ ಈ ತಲೆಮಾರಿನ ಜನ ಇವರು ಚಳವಳಿ ಹೂಡಿದೊಡನೆಯೇ ಅದಕ್ಕೆ ಜಯ ದೊರಕುವುದೆಂದು ಭಾವಿಸಿದರು. <br /> <br /> ಹದಿನೈದು ದಿನ ಹೋರಾಟ ನಡೆದರೂ, ವಾಂಛಿತ ಫಲ ದೊರಕದ್ದರಿಂದ ವ್ಯಗ್ರರಾದರು. ಲೋಕಪಾಲ್ ಮಸೂದೆ ಅಂಗೀಕಾರ ಪಡೆಯಲು ಅನೇಕ ವಿಧಿ ವಿಧಾನಗಳನ್ನು ಸರ್ಕಾರ ಅನುಸರಿಸಬೇಕಾಗುವುದೆಂಬುದರ ಅರಿವು ಹೋರಾಟಕ್ಕೆ ಇಳಿದವರಿಗೆ ಇರಲಿಲ್ಲ. ಈ ಲಂಬಿತ ಪ್ರಕ್ರಿಯೆ ಪೂರ್ಣಗೊಳ್ಳಲು ಕಾಲಾವಕಾಶ ಬೇಕಾಗುತ್ತದೆ ಎಂಬುದರ ಕಲ್ಪನೆ, ಈ ಉತ್ಸಾಹಿ ಯೋಧರಿಗೆ ಇರಲಿಲ್ಲ. <br /> <br /> ಹೀಗಾಗಿ, ಕ್ಷಿಪ್ರವಾಗಿ ತಮ್ಮ ಚಳವಳಿ ಮುಗಿಯುವುದೆಂದು ಲೆಕ್ಕಾಚಾರ ಹಾಕಿದ್ದ ಅವರಿಗೆ ನಿರಾಸೆಯಾಯಿತು.ಈ ವಿಳಂಬಕ್ಕೆ ಕಾರಣವೇನೆಂಬುದನ್ನು ಈಗ ಭ್ರಮನಿರಸನಗೊಂಡ ಈ ಯುವಕರಿಗೆ ವಿವರಿಸಬೇಕು. ಹಿಂದೆ ಈ ಚಳವಳಿಯಲ್ಲಿ ಭಾಗವಹಿಸಿದ್ದವರನ್ನು ಸಂಪರ್ಕ ಮಾಡುವ, ಅವರಿಗೆ ತಿಳುವಳಿಕೆ ನೀಡುವ ಕೆಲಸ ಈಗ ಆರಂಭವಾಗಬೇಕು. ಅವರನ್ನು ಮತ್ತೆ ಹೋರಾಟಕ್ಕೆ ಕರೆತರಬೇಕು.<br /> <br /> ಕೇಜ್ರಿವಾಲ್ರವರು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಸ್ವಯಂಸೇವಕರ ಸಭೆ ಕರೆದಿದ್ದರು. ನಾನು ಆ ಸಭೆಯಲ್ಲಿ `ಮೊದಲು ಅಣ್ಣಾ ಹಜಾರೆಯವರು ಬಾಬಾ ರಾಮದೇವ್ ಜೊತೆಗೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಆದರೆ ಅವರ ಚಳವಳಿಗೆ ನಮ್ಮ ನೈತಿಕ ಬೆಂಬಲವಿದೆ ಎಂದು ಹೇಳಿದ್ದು, ಆನಂತರ ಅವರ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದು ಸ್ವಯಂಸೇವಕರ ಮನದಲ್ಲಿ ಗೊಂದಲ ಉಂಟು ಮಾಡುವುದೆಂದು~ ಹೇಳಿದ್ದೆ. <br /> <br /> ಅಣ್ಣಾ ಹಜಾರೆಯವರು ಕೂಡಲೇ ಎಲ್ಲ ರಾಜ್ಯಗಳ ಮುಖ್ಯ ಸ್ಥಳಗಳಿಗಾದರೂ ಬಂದು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಬೇಕೆಂದು ಆಗ್ರಹಪೂರ್ವಕವಾಗಿ ಹೇಳಿದ್ದೆ. ಈ ಸೂಚನೆಗಳನ್ನು ಅವರು ಅಂಗೀಕರಿಸಿದರು. ತಾವು ಅಭಿಪ್ರಾಯಪಟ್ಟಿರುವಂತೆ ಅಣ್ಣಾ ಹಜಾರೆ ವಿಚಾರದಲ್ಲಿ ಜನತೆಗೆ ಪೂರ್ಣ ನಂಬಿಕೆ ಇದೆ. ಈ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಅಣ್ಣಾ ಹಜಾರೆಯವರದಾಗಿದೆ. ಅಂತೆಯೇ ಪ್ರಜೆಗಳದೂ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಮ್ಮ ಪತ್ರಿಕೆಯ ಸಂಪಾದಕೀಯ ಲೇಖನ `ಆತ್ಮಾವಲೋಕನ ಮಾಡಿಕೊಳ್ಳಿ~ ಸಮಂಜಸವಾಗಿದೆ. ಅಣ್ಣಾ ಹಜಾರೆಯವರ `ಭ್ರಷ್ಟಾಚಾರ ವಿರುದ್ಧ ಭಾರತ~ ಹೂಡಿರುವ ಸತ್ಯಾಗ್ರಹವನ್ನು ತಾವು ತಿಳಿಸಿರುವಂತೆ ರಾಜಕಾರಣಿಗಳನ್ನು ಹೊರತುಪಡಿಸಿ ದೇಶದ ಸಮಸ್ತ ಜನಸಮುದಾಯ ಸ್ವಾಗತಿಸುತ್ತದೆ. <br /> <br /> ಚಳವಳಿಗೆ ಇತ್ತೀಚೆಗೆ ಮೊದಲು ಸೇರುತ್ತಿದ್ದಷ್ಟು ಜನ ಸೇರುತ್ತಿಲ್ಲ. ಅದಕ್ಕೆ ಕಾರಣ ಚಳವಳಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ನಿಮ್ಮ ಅಭಿಪ್ರಾಯ. ಅದಲ್ಲ ಕಾರಣ ಎಂದು ನಾನು ತಿಳಿಸ ಬಯಸುತ್ತೇನೆ.<br /> <br /> ಸರ್ಕಾರದ ಭ್ರಷ್ಟಾಚಾರ ತಾರಕಕ್ಕೆ ಏರಿದೆ. ಅದಕ್ಕಾಗಿ ಕೂಡಲೇ ಲೋಕಪಾಲ್ ಮಸೂದೆಯನ್ನು ಸರ್ಕಾರ ಲೋಕಸಭೆಯ ಮುಂದಿಟ್ಟು ಅದಕ್ಕೆ ಅಂಗೀಕಾರ ಪಡೆಯಬೇಕೆಂದು ಅಣ್ಣಾ ಹಜಾರೆ ಒತ್ತಾಯ ತರಲು ಹೋರಾಟ ಹೂಡಿದರು. ಭಾರತದ ಎಲ್ಲ ಪ್ರಜೆಗಳ ಮನಸ್ಸಿನಲ್ಲಿಯೂ ಸರ್ಕಾರದ ಭ್ರಷ್ಟಾಚಾರದ ಬಗೆಗೆ ಕುದಿತ ಇತ್ತು.<br /> <br /> ಅಣ್ಣಾ ಹಜಾರೆಯವರ ಈ ಚಳವಳಿ ಭಾರತೀಯರೆಲ್ಲರನ್ನೂ ಬಡಿದೆಬ್ಬಿಸಿತು. ಅಣ್ಣಾ ಹಜಾರೆ ದೆಹಲಿಯಲ್ಲಿ ಚಳವಳಿಗೆ ಚಾಲನೆ ಕೊಟ್ಟ ಕೂಡಲೇ ಭಾರತದ ಉದ್ದಗಲಕ್ಕೂ ಜನಾಂದೋಲನ ಭುಗಿಲೆದ್ದಿತು. ಹೋರಾಟದ ಪೂರ್ಣ ಕಲ್ಪನೆ ಇಲ್ಲದ ಈ ತಲೆಮಾರಿನ ಜನ ಇವರು ಚಳವಳಿ ಹೂಡಿದೊಡನೆಯೇ ಅದಕ್ಕೆ ಜಯ ದೊರಕುವುದೆಂದು ಭಾವಿಸಿದರು. <br /> <br /> ಹದಿನೈದು ದಿನ ಹೋರಾಟ ನಡೆದರೂ, ವಾಂಛಿತ ಫಲ ದೊರಕದ್ದರಿಂದ ವ್ಯಗ್ರರಾದರು. ಲೋಕಪಾಲ್ ಮಸೂದೆ ಅಂಗೀಕಾರ ಪಡೆಯಲು ಅನೇಕ ವಿಧಿ ವಿಧಾನಗಳನ್ನು ಸರ್ಕಾರ ಅನುಸರಿಸಬೇಕಾಗುವುದೆಂಬುದರ ಅರಿವು ಹೋರಾಟಕ್ಕೆ ಇಳಿದವರಿಗೆ ಇರಲಿಲ್ಲ. ಈ ಲಂಬಿತ ಪ್ರಕ್ರಿಯೆ ಪೂರ್ಣಗೊಳ್ಳಲು ಕಾಲಾವಕಾಶ ಬೇಕಾಗುತ್ತದೆ ಎಂಬುದರ ಕಲ್ಪನೆ, ಈ ಉತ್ಸಾಹಿ ಯೋಧರಿಗೆ ಇರಲಿಲ್ಲ. <br /> <br /> ಹೀಗಾಗಿ, ಕ್ಷಿಪ್ರವಾಗಿ ತಮ್ಮ ಚಳವಳಿ ಮುಗಿಯುವುದೆಂದು ಲೆಕ್ಕಾಚಾರ ಹಾಕಿದ್ದ ಅವರಿಗೆ ನಿರಾಸೆಯಾಯಿತು.ಈ ವಿಳಂಬಕ್ಕೆ ಕಾರಣವೇನೆಂಬುದನ್ನು ಈಗ ಭ್ರಮನಿರಸನಗೊಂಡ ಈ ಯುವಕರಿಗೆ ವಿವರಿಸಬೇಕು. ಹಿಂದೆ ಈ ಚಳವಳಿಯಲ್ಲಿ ಭಾಗವಹಿಸಿದ್ದವರನ್ನು ಸಂಪರ್ಕ ಮಾಡುವ, ಅವರಿಗೆ ತಿಳುವಳಿಕೆ ನೀಡುವ ಕೆಲಸ ಈಗ ಆರಂಭವಾಗಬೇಕು. ಅವರನ್ನು ಮತ್ತೆ ಹೋರಾಟಕ್ಕೆ ಕರೆತರಬೇಕು.<br /> <br /> ಕೇಜ್ರಿವಾಲ್ರವರು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಸ್ವಯಂಸೇವಕರ ಸಭೆ ಕರೆದಿದ್ದರು. ನಾನು ಆ ಸಭೆಯಲ್ಲಿ `ಮೊದಲು ಅಣ್ಣಾ ಹಜಾರೆಯವರು ಬಾಬಾ ರಾಮದೇವ್ ಜೊತೆಗೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಆದರೆ ಅವರ ಚಳವಳಿಗೆ ನಮ್ಮ ನೈತಿಕ ಬೆಂಬಲವಿದೆ ಎಂದು ಹೇಳಿದ್ದು, ಆನಂತರ ಅವರ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದು ಸ್ವಯಂಸೇವಕರ ಮನದಲ್ಲಿ ಗೊಂದಲ ಉಂಟು ಮಾಡುವುದೆಂದು~ ಹೇಳಿದ್ದೆ. <br /> <br /> ಅಣ್ಣಾ ಹಜಾರೆಯವರು ಕೂಡಲೇ ಎಲ್ಲ ರಾಜ್ಯಗಳ ಮುಖ್ಯ ಸ್ಥಳಗಳಿಗಾದರೂ ಬಂದು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಬೇಕೆಂದು ಆಗ್ರಹಪೂರ್ವಕವಾಗಿ ಹೇಳಿದ್ದೆ. ಈ ಸೂಚನೆಗಳನ್ನು ಅವರು ಅಂಗೀಕರಿಸಿದರು. ತಾವು ಅಭಿಪ್ರಾಯಪಟ್ಟಿರುವಂತೆ ಅಣ್ಣಾ ಹಜಾರೆ ವಿಚಾರದಲ್ಲಿ ಜನತೆಗೆ ಪೂರ್ಣ ನಂಬಿಕೆ ಇದೆ. ಈ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಅಣ್ಣಾ ಹಜಾರೆಯವರದಾಗಿದೆ. ಅಂತೆಯೇ ಪ್ರಜೆಗಳದೂ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>