ಶಾಸಕರು ಅರ್ಹರೆಂದು
ಸಾಬೀತಾಗಿ ಮರಳಿದ್ದಾರೆ
ಕರ್ನಾಟಕದ ರಾಜಕೀಯಕ್ಕೆ
ಈಗ ರಾಜಕೀಯ ರಂಗ
ಪಡೆದುಕೊಂಡಿದೆ ಅನೇಕ ರಂಗು
ಮುಖ್ಯಮಂತ್ರಿಗಳಿಂದ
ಈ ಶಾಸಕರೆಂಬ ಮೀನುಗಳ
ಸೆಳೆಯಲು ಆಮಿಷಗಳ
ನೂರೆಂಟು ಗಾಳ
ಹಿಂದಿನದೆಲ್ಲ ಮರೆತು
ಅಧಿಕಾರದ ವಾಸನೆಯ
ಗಾಳವನ್ನು ಕಚ್ಚಲಿವೆ,
ಕಚ್ಚಿ ಕುಣಿಯಲಿವೆ
ಅನುಸರಿಸಿ ಮುಖ್ಯಮಂತ್ರಿಗಳ
ತಾಳ!