ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ನಂದಿತಾ ಸಾವಿನ ಹಿನ್ನೆಲೆಯಲ್ಲಿ (ನಿಗೂಢ) ತಮ್ಮ ವಿರುದ್ಧ ಆರೋಪ ಮಾಡಿದವರಿಗೆ ಶಿಕ್ಷೆಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದರಂತೆ. ಇದನ್ನು ಪತ್ರಿಕೆಯಲ್ಲಿ ಓದುತ್ತಿದ್ದಂತೆ ನಗಬೇಕೊ ಅಳಬೇಕೊ ಒಂದೂ ಗೊತ್ತಾಗಲಿಲ್ಲ.
ಒಂದು ವೇಳೆ ಮನನೊಂದು ದೇವರಿಗೆ ಮೊರೆಹೊಕ್ಕು ‘ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ’ ಎಂದು ದೇವರಲ್ಲಿ ಪ್ರಾರ್ಥಿಸಿದ್ದರೆ ಅವರ ನಡೆಯನ್ನು ಮೆಚ್ಚಬಹುದಿತ್ತು.
ಅದನ್ನು ಬಿಟ್ಟು ‘ಆರೋಪ ಹೊರಿಸಿದವರಿಗೆ ಶಿಕ್ಷೆಯಾಗಲಿ’ ಎಂದು ಪ್ರಾರ್ಥಿಸಿದ್ದೇ ನಿಜವಾದರೆ ಇದೊಂದು ವಿರೋಧಿಗಳ ಬಾಯಿ ಮುಚ್ಚಿಸುವ ಹುನ್ನಾರವಲ್ಲದೇ ಇನ್ನೇನು? ಇಂಥವರ ಸಂಕುಚಿತ ಮನೋಭಾವಕ್ಕೆ ಏನೆನ್ನಬೇಕು?