<div> ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಆದರೆ ರಾಜಕೀಯ ಪಕ್ಷಗಳಲ್ಲಿನ ಬಿರುಸಿನ ಚಟುವಟಿಕೆಗಳನ್ನು ನೋಡಿದರೆ, ಚುನಾವಣೆ ಇನ್ನೇನು ಎರಡೋ ಮೂರೋ ತಿಂಗಳಲ್ಲಿ ಬಂದೇಬಿಟ್ಟಿತೇನೋ ಎಂದು ಅನ್ನಿಸುತ್ತಿದೆ. <br /> <br /> ಪಕ್ಷಾಂತರ, ಅರೋಪ- ಪ್ರತ್ಯಾರೋಪ, ಗೆಲ್ಲುವ ಕುದುರೆಗೆ ಹುಡುಕಾಟ, ತೇಜೋವಧೆ, ವ್ಯಕ್ತಿ ಪೂಜೆ ಮಧ್ಯೆ ರಾಜ್ಯದ ಅಭಿವೃದ್ಧಿ ವಿಷಯ, ಭೀಕರ ಬರ... ನೇಪಥ್ಯಕ್ಕೆ ಸರಿದಿವೆ.<div> </div><div> ಮುಂದಿನ ದಿನಗಳಲ್ಲಿ ಪ್ರಧಾನಿಯೂ ರಾಜ್ಯಕ್ಕೆ ಭೇಟಿ ನೀಡಬಹುದು. ಹಲವಾರು ಯೋಜನೆಗಳ ಘೋಷಣೆಯಾಗಬಹುದು. ಅಡಿಗಲ್ಲುಗಳು ಬೀಳಬಹುದು. ನಿಂತ ಕೆಲವು ಯೋಜನೆಗಳು ಪುನರಾರಂಭವಾಗಬಹುದು.<br /> <br /> ಕೇಂದ್ರದ ಸಚಿವರು ಕರ್ನಾಟಕಕ್ಕೆ ಬರಬಹುದು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ನಿಚ್ಚಳವಾಗಿ ಕಾಣಬಹುದು. ಮಹಾದಾಯಿ, ಕಾವೇರಿ ನೀರು ಹಂಚಿಕೆಯ ಸಮಸ್ಯೆಗಳು ಗಮನ ಸೆಳೆಯಬಹುದು... ಪ್ರಜಾಪ್ರಭುತ್ವಕ್ಕೆ ವ್ಯಾಖ್ಯೆ ಕೊಟ್ಟ ಅಬ್ರಹಾಂ ಲಿಂಕನ್ ಬದುಕಿದ್ದಿದ್ದರೆ, ತಮ್ಮ ವ್ಯಾಖ್ಯೆಯನ್ನು ಬದಲಿಸುತ್ತಿದ್ದರೇನೋ?</div><div> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಆದರೆ ರಾಜಕೀಯ ಪಕ್ಷಗಳಲ್ಲಿನ ಬಿರುಸಿನ ಚಟುವಟಿಕೆಗಳನ್ನು ನೋಡಿದರೆ, ಚುನಾವಣೆ ಇನ್ನೇನು ಎರಡೋ ಮೂರೋ ತಿಂಗಳಲ್ಲಿ ಬಂದೇಬಿಟ್ಟಿತೇನೋ ಎಂದು ಅನ್ನಿಸುತ್ತಿದೆ. <br /> <br /> ಪಕ್ಷಾಂತರ, ಅರೋಪ- ಪ್ರತ್ಯಾರೋಪ, ಗೆಲ್ಲುವ ಕುದುರೆಗೆ ಹುಡುಕಾಟ, ತೇಜೋವಧೆ, ವ್ಯಕ್ತಿ ಪೂಜೆ ಮಧ್ಯೆ ರಾಜ್ಯದ ಅಭಿವೃದ್ಧಿ ವಿಷಯ, ಭೀಕರ ಬರ... ನೇಪಥ್ಯಕ್ಕೆ ಸರಿದಿವೆ.<div> </div><div> ಮುಂದಿನ ದಿನಗಳಲ್ಲಿ ಪ್ರಧಾನಿಯೂ ರಾಜ್ಯಕ್ಕೆ ಭೇಟಿ ನೀಡಬಹುದು. ಹಲವಾರು ಯೋಜನೆಗಳ ಘೋಷಣೆಯಾಗಬಹುದು. ಅಡಿಗಲ್ಲುಗಳು ಬೀಳಬಹುದು. ನಿಂತ ಕೆಲವು ಯೋಜನೆಗಳು ಪುನರಾರಂಭವಾಗಬಹುದು.<br /> <br /> ಕೇಂದ್ರದ ಸಚಿವರು ಕರ್ನಾಟಕಕ್ಕೆ ಬರಬಹುದು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ನಿಚ್ಚಳವಾಗಿ ಕಾಣಬಹುದು. ಮಹಾದಾಯಿ, ಕಾವೇರಿ ನೀರು ಹಂಚಿಕೆಯ ಸಮಸ್ಯೆಗಳು ಗಮನ ಸೆಳೆಯಬಹುದು... ಪ್ರಜಾಪ್ರಭುತ್ವಕ್ಕೆ ವ್ಯಾಖ್ಯೆ ಕೊಟ್ಟ ಅಬ್ರಹಾಂ ಲಿಂಕನ್ ಬದುಕಿದ್ದಿದ್ದರೆ, ತಮ್ಮ ವ್ಯಾಖ್ಯೆಯನ್ನು ಬದಲಿಸುತ್ತಿದ್ದರೇನೋ?</div><div> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>