<p>ಕಳಂಕರಹಿತರ(!) ಸ್ವಚ್ಛ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೊಂದು ತಮಾಷೆಯ ವಾಕ್ಯವಾಗಿ ಕಂಡು ಬಂದರೆ ಅಚ್ಚರಿಯೇನಿಲ್ಲ. ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿರುವ ಪಕ್ಷವೊಂದರ ಹಗರಣಗಳು ನಿತ್ಯವೆಂಬಂತೆ ಅಪ್ಪಳಿಸುತ್ತಿರುವ ದಿನಗಳಲ್ಲಿ, ರಸಾತಳ ಮುಟ್ಟಿದ್ದ ಹಿಂದಿನ ಬಿಜೆಪಿ ಸರ್ಕಾರದ ದಿವಾಳಿತನದ ಹೊತ್ತಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರ `ಕೈ' ಪಾಳಯಕ್ಕೆ ಜಯದ ಮಾಲೆ ಹಾಕಿದ.</p>.<p>ಈಗ ಸಿದ್ದರಾಮಯ್ಯನವರ ತಂಡದಲ್ಲಿರುವವರೆಲ್ಲಾ ಕಳಂಕರಹಿತರೆ? ಇದನ್ನು ವ್ಯಾಖ್ಯಾನಿಸುವುದು ಹೇಗೆ? ಚುನಾವಣೆಯನ್ನು ಅವರುಗಳು ಎದುರಿಸಿ ಗೆದ್ದು ಬಂದ ರೀತಿಯಲ್ಲೆ? ಚುನಾವಣಾ ಆಯೋಗ ನಿಗದಿಪಡಿಸಿದ ಹಣಕ್ಕಿಂತ ಒಂದು ರೂಪಾಯಿಯನ್ನು ಜಾಸ್ತಿ ಖರ್ಚು ಮಾಡದೆ ಗೆದ್ದು ಬಂದವರೆಷ್ಟು ಜನ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಬಹಿರಂಗ ಪಡಿಸಲಿದೆಯೆ?<br /> <br /> ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಒಂದರಿಂದ ಹತ್ತರವರೆಗಿನ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲೇ ಕಲಿಯುವಂತೆ ಕ್ರಮ ಕೈಗೊಳ್ಳಬೇಕು. ಯುವಜನ ಕೃಷಿಯಲ್ಲಿ ತೊಡಗಲು ಪ್ರೋತ್ಸಾಹದಾಯಕ ಯೋಜನೆ ಹಮ್ಮಿಕೊಳ್ಳಬೇಕಿದೆ. ಆಹಾರ ಬೆಳೆಯುವ ರೈತನನ್ನು ಈ ಸರ್ಕಾರ ರಕ್ಷಿಸಬೇಕಾದ ತುರ್ತಿದೆ. ಇದೆಲ್ಲಾ ಈ ಸರ್ಕಾರದ ಅರಿವಿನಲ್ಲಿದೆ ಎಂಬ ನಂಬಿಕೆ ಈ ಬಡ ಮತದಾರನದು.<br /> <strong>-ಚಂದ್ರಶೇಖರ್ ಎನ್. ಸಿರಿವಂತೆ .</strong></p>.<p><strong>ಸೂಚನೆ</strong></p>.<p><strong>`ಪ್ರಜಾವಾಣಿ' ಅಭಿಮತ ಪುಟದ ವಾಚಕರ ವಾಣಿ ಅಂಕಣಕ್ಕೆ ಬರೆಯುವ ಪತ್ರಗಳು 100 ಪದಗಳ ಮಿತಿಯಲ್ಲಿರಲಿ.<br /> ವಿಳಾಸ: ಸಂಪಾದಕರು, ಪ್ರಜಾವಾಣಿ, ವಾಚಕರ ವಾಣಿ ವಿಭಾಗ, 75, ಎಂ.ಜಿ.ರಸ್ತೆ, ಬೆಂಗಳೂರು-560 001</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳಂಕರಹಿತರ(!) ಸ್ವಚ್ಛ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೊಂದು ತಮಾಷೆಯ ವಾಕ್ಯವಾಗಿ ಕಂಡು ಬಂದರೆ ಅಚ್ಚರಿಯೇನಿಲ್ಲ. ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿರುವ ಪಕ್ಷವೊಂದರ ಹಗರಣಗಳು ನಿತ್ಯವೆಂಬಂತೆ ಅಪ್ಪಳಿಸುತ್ತಿರುವ ದಿನಗಳಲ್ಲಿ, ರಸಾತಳ ಮುಟ್ಟಿದ್ದ ಹಿಂದಿನ ಬಿಜೆಪಿ ಸರ್ಕಾರದ ದಿವಾಳಿತನದ ಹೊತ್ತಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರ `ಕೈ' ಪಾಳಯಕ್ಕೆ ಜಯದ ಮಾಲೆ ಹಾಕಿದ.</p>.<p>ಈಗ ಸಿದ್ದರಾಮಯ್ಯನವರ ತಂಡದಲ್ಲಿರುವವರೆಲ್ಲಾ ಕಳಂಕರಹಿತರೆ? ಇದನ್ನು ವ್ಯಾಖ್ಯಾನಿಸುವುದು ಹೇಗೆ? ಚುನಾವಣೆಯನ್ನು ಅವರುಗಳು ಎದುರಿಸಿ ಗೆದ್ದು ಬಂದ ರೀತಿಯಲ್ಲೆ? ಚುನಾವಣಾ ಆಯೋಗ ನಿಗದಿಪಡಿಸಿದ ಹಣಕ್ಕಿಂತ ಒಂದು ರೂಪಾಯಿಯನ್ನು ಜಾಸ್ತಿ ಖರ್ಚು ಮಾಡದೆ ಗೆದ್ದು ಬಂದವರೆಷ್ಟು ಜನ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಬಹಿರಂಗ ಪಡಿಸಲಿದೆಯೆ?<br /> <br /> ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಒಂದರಿಂದ ಹತ್ತರವರೆಗಿನ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲೇ ಕಲಿಯುವಂತೆ ಕ್ರಮ ಕೈಗೊಳ್ಳಬೇಕು. ಯುವಜನ ಕೃಷಿಯಲ್ಲಿ ತೊಡಗಲು ಪ್ರೋತ್ಸಾಹದಾಯಕ ಯೋಜನೆ ಹಮ್ಮಿಕೊಳ್ಳಬೇಕಿದೆ. ಆಹಾರ ಬೆಳೆಯುವ ರೈತನನ್ನು ಈ ಸರ್ಕಾರ ರಕ್ಷಿಸಬೇಕಾದ ತುರ್ತಿದೆ. ಇದೆಲ್ಲಾ ಈ ಸರ್ಕಾರದ ಅರಿವಿನಲ್ಲಿದೆ ಎಂಬ ನಂಬಿಕೆ ಈ ಬಡ ಮತದಾರನದು.<br /> <strong>-ಚಂದ್ರಶೇಖರ್ ಎನ್. ಸಿರಿವಂತೆ .</strong></p>.<p><strong>ಸೂಚನೆ</strong></p>.<p><strong>`ಪ್ರಜಾವಾಣಿ' ಅಭಿಮತ ಪುಟದ ವಾಚಕರ ವಾಣಿ ಅಂಕಣಕ್ಕೆ ಬರೆಯುವ ಪತ್ರಗಳು 100 ಪದಗಳ ಮಿತಿಯಲ್ಲಿರಲಿ.<br /> ವಿಳಾಸ: ಸಂಪಾದಕರು, ಪ್ರಜಾವಾಣಿ, ವಾಚಕರ ವಾಣಿ ವಿಭಾಗ, 75, ಎಂ.ಜಿ.ರಸ್ತೆ, ಬೆಂಗಳೂರು-560 001</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>