ಸಾಹಿತ್ಯ ಸಮ್ಮೇಳನಗಳಲ್ಲಿ ಕಾರ್ಯಕಾರಿ ಸಮಿತಿ ತೆಗೆದುಕೊಳ್ಳುವ ನಿರ್ಣಯಗಳು ಊರ್ಜಿತವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸದೆ ಉಪೇಕ್ಷೆ ಮಾಡುತ್ತಿದೆ.
ತಾಲ್ಲೂಕು, ಜಿಲ್ಲಾ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ತೆಗೆದುಕೊಳ್ಳುವ ನಿರ್ಣಯಗಳು ಕೇವಲ ಕಾಟಾಚಾರಕ್ಕೆ ಎನ್ನುವಂತಾಗಿದೆ. ಸರ್ಕಾರ ಈ ಹಿಂದೆ ಕಸಾಪ ತೆಗೆದುಕೊಂಡ ನಿರ್ಣಯಗಳನ್ನು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ತಂದಿದೆ ಎಂಬ ಮಾಹಿತಿ ಕೊಡಲಿ. ಇಲ್ಲವೇ ಕಸಾಪ ನಿರ್ಣಯ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಮಾನ ಉಳಿಸಿಕೊಳ್ಳಲಿ.