<p>ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಮುನ್ನ ಯಲಹಂಕ ಉಪನಗರಕ್ಕೆ ವಾರಕ್ಕೆ ಮೂರ್ನಾಲ್ಕು ದಿನ ಕಾವೇರಿ ನೀರನ್ನು ಒದಗಿಸುತ್ತಿದ್ದರು. ಪಾಲಿಕೆಗೆ ಸೇರಿದ ಮೇಲೆ ವಾರಕ್ಕೆ ಒಂದು ಅಥವಾ ಎರಡು ದಿನ ಮಾತ್ರ ನೀರು ಬರುತ್ತದೆ. ಇದರಿಂದ ನಾಗರಿಕರಿಗೆ ಬಹಳ ತೊಂದರೆಯಾಗಿದೆ. <br /> <br /> ಆದ್ದರಿಂದ ಈ ಉಪನಗರಕ್ಕೆ ಮೊದಲಿನಂತೆ ವಾರಕ್ಕೆ ಮೂರ್ನಾಲ್ಕು ದಿನವಾದರೂ ಕಾವೇರಿ ನೀರನ್ನು ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಪಾಲಿಕೆಯ ವರಿಷ್ಠರಲ್ಲಿ ನನ್ನ ಕಳಕಳಿಯ ಮನವಿ.<br /> <strong>-ಸತ್ಯಾನಂದ</strong><br /> <br /> <strong>ಮೇಯರ್ಗೆ ಕೃತಜ್ಞತೆ</strong><br /> ಮೆಟ್ರೊ ಕೆಲಸದಿಂದ ಬೆಂಗಳೂರು ರಸ್ತೆಗಳು ಹಾಳಾಗಿದ್ದು ನಿತ್ಯವೂ ಚಾಲಕರು ವಾಹನ ಓಡಿಸಲು ಹರ ಸಾಹಸ ಪಡುತ್ತ್ದ್ದಿದರು. ಇದರಿಂದ ಅನೇಕ ಅಪಘಾತಗಳು ಕೂಡ ಸಂಭವಿಸಿದ್ದವು. <br /> <br /> ಈ ಹಿನ್ನೆಲೆಯಲ್ಲಿ ಮೇಯರ್ ಶಾರದಮ್ಮನವರು ವಿವಿಧೆಡೆ ಸಂಚರಿಸಿ ರಸ್ತೆ ದುಸ್ಥಿತಿಯನ್ನು ಕಣ್ಣಾರೆ ಕಂಡು ಮೆಟ್ರೊ ನಿಗಮಕ್ಕೆ ಎಚ್ಚರಿಕೆ ನೀಡಿ ಸೆಪ್ಟೆಂಬರ್ 25ರ ಒಳಗೆ ರಸ್ತೆಗಳನ್ನು ರಿಪೇರಿ ಮಾಡಬೇಕೆಂದು ಆದೇಶಿಸಿದ್ದರು.<br /> <br /> ಇದರ ಫಲವಾಗಿ ನವರಂಗ್ ಬಳಿಯ ರಸ್ತೆಗಳು ಈಗ ರಿಪೇರಿ ಕಂಡಿವೆ. ವಾಹನಗಳು ಸಲೀಸಾಗಿ ಚಲಿಸುವಂತಾಗಿದೆ. ಇದಕ್ಕಾಗಿ ಮೇಯರ್ ಅವರಿಗೆ ಕೃತಜ್ಞತೆಗಳು.<br /> <br /> ಇದೇ ರೀತಿ ಅವರು ನಗರದ ಎಲ್ಲ ಭಾಗಗಳಿಗೂ ಭೇಟಿ ನೀಡಿ ಸ್ವಚ್ಛತೆ ಮೊದಲಾದ ವಿಷಯಗಳಲ್ಲೂ ಆಸಕ್ತಿವಹಿಸಿ ನಾಗರಿಕರ ಕಷ್ಟಗಳನ್ನು ನಿವಾರಿಸಬೇಕೆಂದು ಕೇಳಿಕೊಳ್ಳುತ್ತೇನೆ.<br /> <strong>ಡಿ.ಎಸ್. ನಂಜುಂಡಯ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಮುನ್ನ ಯಲಹಂಕ ಉಪನಗರಕ್ಕೆ ವಾರಕ್ಕೆ ಮೂರ್ನಾಲ್ಕು ದಿನ ಕಾವೇರಿ ನೀರನ್ನು ಒದಗಿಸುತ್ತಿದ್ದರು. ಪಾಲಿಕೆಗೆ ಸೇರಿದ ಮೇಲೆ ವಾರಕ್ಕೆ ಒಂದು ಅಥವಾ ಎರಡು ದಿನ ಮಾತ್ರ ನೀರು ಬರುತ್ತದೆ. ಇದರಿಂದ ನಾಗರಿಕರಿಗೆ ಬಹಳ ತೊಂದರೆಯಾಗಿದೆ. <br /> <br /> ಆದ್ದರಿಂದ ಈ ಉಪನಗರಕ್ಕೆ ಮೊದಲಿನಂತೆ ವಾರಕ್ಕೆ ಮೂರ್ನಾಲ್ಕು ದಿನವಾದರೂ ಕಾವೇರಿ ನೀರನ್ನು ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಪಾಲಿಕೆಯ ವರಿಷ್ಠರಲ್ಲಿ ನನ್ನ ಕಳಕಳಿಯ ಮನವಿ.<br /> <strong>-ಸತ್ಯಾನಂದ</strong><br /> <br /> <strong>ಮೇಯರ್ಗೆ ಕೃತಜ್ಞತೆ</strong><br /> ಮೆಟ್ರೊ ಕೆಲಸದಿಂದ ಬೆಂಗಳೂರು ರಸ್ತೆಗಳು ಹಾಳಾಗಿದ್ದು ನಿತ್ಯವೂ ಚಾಲಕರು ವಾಹನ ಓಡಿಸಲು ಹರ ಸಾಹಸ ಪಡುತ್ತ್ದ್ದಿದರು. ಇದರಿಂದ ಅನೇಕ ಅಪಘಾತಗಳು ಕೂಡ ಸಂಭವಿಸಿದ್ದವು. <br /> <br /> ಈ ಹಿನ್ನೆಲೆಯಲ್ಲಿ ಮೇಯರ್ ಶಾರದಮ್ಮನವರು ವಿವಿಧೆಡೆ ಸಂಚರಿಸಿ ರಸ್ತೆ ದುಸ್ಥಿತಿಯನ್ನು ಕಣ್ಣಾರೆ ಕಂಡು ಮೆಟ್ರೊ ನಿಗಮಕ್ಕೆ ಎಚ್ಚರಿಕೆ ನೀಡಿ ಸೆಪ್ಟೆಂಬರ್ 25ರ ಒಳಗೆ ರಸ್ತೆಗಳನ್ನು ರಿಪೇರಿ ಮಾಡಬೇಕೆಂದು ಆದೇಶಿಸಿದ್ದರು.<br /> <br /> ಇದರ ಫಲವಾಗಿ ನವರಂಗ್ ಬಳಿಯ ರಸ್ತೆಗಳು ಈಗ ರಿಪೇರಿ ಕಂಡಿವೆ. ವಾಹನಗಳು ಸಲೀಸಾಗಿ ಚಲಿಸುವಂತಾಗಿದೆ. ಇದಕ್ಕಾಗಿ ಮೇಯರ್ ಅವರಿಗೆ ಕೃತಜ್ಞತೆಗಳು.<br /> <br /> ಇದೇ ರೀತಿ ಅವರು ನಗರದ ಎಲ್ಲ ಭಾಗಗಳಿಗೂ ಭೇಟಿ ನೀಡಿ ಸ್ವಚ್ಛತೆ ಮೊದಲಾದ ವಿಷಯಗಳಲ್ಲೂ ಆಸಕ್ತಿವಹಿಸಿ ನಾಗರಿಕರ ಕಷ್ಟಗಳನ್ನು ನಿವಾರಿಸಬೇಕೆಂದು ಕೇಳಿಕೊಳ್ಳುತ್ತೇನೆ.<br /> <strong>ಡಿ.ಎಸ್. ನಂಜುಂಡಯ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>