<p>ನನಗೆ ತೀರ ಈಚೆಗೆ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿರುವಂತೆ ಹಂಪಿ ಪಕ್ಕದ ಪಂಪಾ ಸರೋವರದ ದಡದಲ್ಲಿರುವ ಕಿಷ್ಕಿಂಧಾ ಪರ್ವತದ ಬಂಡೆಯಲ್ಲಿ ಹನುಮಂತನ ಮೂರ್ತಿಯನ್ನು ಕೆತ್ತಿಸುವ ಪ್ರಯತ್ನವು ಆರಂಭವಾಗಿ ಅದಕ್ಕೆ ಬಳ್ಳಾರಿ ಜಿಲ್ಲಾಧಿಕಾರಿಯವರ ಅನುಮತಿಯೂ ದೊರಕಿದೆ.<br /> <br /> ಈ ಸಂಗತಿ ನಿಜವಾಗಿದ್ದರೆ ಅದು ಅತ್ಯಂತ ಖೇದನೀಯ. ಪಂಪಾಸರೋವರಕ್ಕೂ ರಾಮಾಯಣದ ಕತೆಗೂ ಸಂಬಂಧವಿರುವುದು ಪ್ರಸಿದ್ಧ ವಿಷಯವೇ. ಆದರೆ ಕಿಷ್ಕಿಂಧ ಪರ್ವತದಂತಹ ಬಂಡೆಗಳ ಬೆಟ್ಟದ ಪ್ರಾಕೃತಿಕ ಸೌಂದರ್ಯ ನಾಶವಾಗುವುದಲ್ಲದೆ ಅದು ವಿಗ್ರಹ ಹನುಮಂತನಿಂದಾಗಿ ಪೂಜಾ ಸ್ಥಳವೂ ಆದರೆ ಆಗಬಹುದಾದ ಅನಾಹುತಗಳೂ ಸಾಕಷ್ಟಿವೆ. <br /> <br /> ಈ ಹಿನ್ನೆಲೆಯಲ್ಲಿ ಹನುಮಂತನ ವಿಗ್ರಹವನ್ನು ಕೆತ್ತಿಸುವ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸುತ್ತೇನೆ, ಅಲ್ಲಿಗೆ ಉತ್ತರ ಭಾರತದ ಸಾವಿರಾರು ಭಕ್ತರು ವಿಶೇಷವಾಗಿ ಬಂದು ಅಮೂರ್ತ ಹನುಮಂತನನ್ನು ಭಾವನಾತ್ಮಕವಾಗಿ ಅನುಭವಿಸುವ ವಾತಾವರಣವು ಈಗ ಇರುವಂತೆಯೇ ಉಳಿಯಬೇಕು.<br /> <br /> ಅಲ್ಲಿನ ಪಂಪಾಂಬಿಕೆಗೆ ಮೊದಲಿನಿಂದ ಸಲ್ಲುತ್ತಿರುವ ಪೂಜೆ ಸಹಜವಾಗಿಯೇ ಮುಂದುವರಿಯುತ್ತದೆ. ವಿಗ್ರಹ ಕೆತ್ತಿಸುವುದು ವಿಶ್ವಪರಂಪರೆಯ ಪಟ್ಟಿಗೆ ಹಂಪಿಯನ್ನು ಸೇರಿಸಿರುವ ಯುನೆಸ್ಕೋದ ನಿಯಮಗಳಿಗೆ ಭಂಗ ತರುತ್ತದೆ. ಏಕೆಂದರೆ ಪಂಪಾ ಕ್ಷೇತ್ರವು ಹಂಪಿಯ `ರಕ್ಷಣಾ ಪ್ರದೇಶ~ಕ್ಕೆ ಸೇರಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನನಗೆ ತೀರ ಈಚೆಗೆ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿರುವಂತೆ ಹಂಪಿ ಪಕ್ಕದ ಪಂಪಾ ಸರೋವರದ ದಡದಲ್ಲಿರುವ ಕಿಷ್ಕಿಂಧಾ ಪರ್ವತದ ಬಂಡೆಯಲ್ಲಿ ಹನುಮಂತನ ಮೂರ್ತಿಯನ್ನು ಕೆತ್ತಿಸುವ ಪ್ರಯತ್ನವು ಆರಂಭವಾಗಿ ಅದಕ್ಕೆ ಬಳ್ಳಾರಿ ಜಿಲ್ಲಾಧಿಕಾರಿಯವರ ಅನುಮತಿಯೂ ದೊರಕಿದೆ.<br /> <br /> ಈ ಸಂಗತಿ ನಿಜವಾಗಿದ್ದರೆ ಅದು ಅತ್ಯಂತ ಖೇದನೀಯ. ಪಂಪಾಸರೋವರಕ್ಕೂ ರಾಮಾಯಣದ ಕತೆಗೂ ಸಂಬಂಧವಿರುವುದು ಪ್ರಸಿದ್ಧ ವಿಷಯವೇ. ಆದರೆ ಕಿಷ್ಕಿಂಧ ಪರ್ವತದಂತಹ ಬಂಡೆಗಳ ಬೆಟ್ಟದ ಪ್ರಾಕೃತಿಕ ಸೌಂದರ್ಯ ನಾಶವಾಗುವುದಲ್ಲದೆ ಅದು ವಿಗ್ರಹ ಹನುಮಂತನಿಂದಾಗಿ ಪೂಜಾ ಸ್ಥಳವೂ ಆದರೆ ಆಗಬಹುದಾದ ಅನಾಹುತಗಳೂ ಸಾಕಷ್ಟಿವೆ. <br /> <br /> ಈ ಹಿನ್ನೆಲೆಯಲ್ಲಿ ಹನುಮಂತನ ವಿಗ್ರಹವನ್ನು ಕೆತ್ತಿಸುವ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸುತ್ತೇನೆ, ಅಲ್ಲಿಗೆ ಉತ್ತರ ಭಾರತದ ಸಾವಿರಾರು ಭಕ್ತರು ವಿಶೇಷವಾಗಿ ಬಂದು ಅಮೂರ್ತ ಹನುಮಂತನನ್ನು ಭಾವನಾತ್ಮಕವಾಗಿ ಅನುಭವಿಸುವ ವಾತಾವರಣವು ಈಗ ಇರುವಂತೆಯೇ ಉಳಿಯಬೇಕು.<br /> <br /> ಅಲ್ಲಿನ ಪಂಪಾಂಬಿಕೆಗೆ ಮೊದಲಿನಿಂದ ಸಲ್ಲುತ್ತಿರುವ ಪೂಜೆ ಸಹಜವಾಗಿಯೇ ಮುಂದುವರಿಯುತ್ತದೆ. ವಿಗ್ರಹ ಕೆತ್ತಿಸುವುದು ವಿಶ್ವಪರಂಪರೆಯ ಪಟ್ಟಿಗೆ ಹಂಪಿಯನ್ನು ಸೇರಿಸಿರುವ ಯುನೆಸ್ಕೋದ ನಿಯಮಗಳಿಗೆ ಭಂಗ ತರುತ್ತದೆ. ಏಕೆಂದರೆ ಪಂಪಾ ಕ್ಷೇತ್ರವು ಹಂಪಿಯ `ರಕ್ಷಣಾ ಪ್ರದೇಶ~ಕ್ಕೆ ಸೇರಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>