ಜಲಪಾತದ ಮೇಲ್ದಂಡೆಯಲ್ಲಿ ನೀರು ಕುಡಿಯುವ ತೋಳ (ಪ್ರತಿಪಕ್ಷಗಳು) ದಡದಲ್ಲಿ ನೀರು ಕುಡಿಯುತ್ತಿದ್ದ ಕುರಿಮರಿ (ಮುಖ್ಯಮಂತ್ರಿಗಳು) ಮೇಲೆ ಎಂಜಲು ಮಾಡಿದ ನೆಪ ಮುಂದು ಮಾಡಿ ಬೇಟೆಯಾಡಲು ಹವಣಿಸಿತಂತೆ. ಹಾಗೇ ವಿರೋಧ ಪಕ್ಷ ಮುಖ್ಯಮಂತ್ರಿಯ ಭಾರಿ ಮೌಲ್ಯದ ವಾಚ್ ಪ್ರಕರಣವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ.
ವಾಸ್ತವವಾಗಿ ಉಡುಗೊರೆಯು ಕೊಡುವವರು ಹಾಗೂ ತೆಗೆದುಕೊಳ್ಳುವವರ ಖಾಸಗಿ ಆಸಕ್ತಿಗೆ ಸಂಬಂಧಿಸಿದ್ದು. ಸುಡು ಬೇಸಿಗೆ ಬಿಸಿಲಿನ ತಾಪದ ಜೊತೆಗೆ ತಮ್ಮದೇ ಸಮಸ್ಯೆಗಳಲ್ಲಿ ಬೇಯುವ ಶ್ರೀಸಾಮಾನ್ಯ ಇಂತಹ ಕ್ಷುಲ್ಲಕ ಚರ್ಚೆಗಳಿಗೆ ಮಹತ್ವ ಕೊಡಲಾರ.