<p>ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಭಾರತದ ಬಹುತೇಕ ರಾಜ್ಯಗಳು ಅಳವಡಿಸಿಕೊಂಡು 9 ರಿಂದ 12ನೆ ತರಗತಿಯವರೆಗೆ ಪ್ರೌಢ ಶಿಕ್ಷಣವೆಂದು ಗುರುತಿಸಿವೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. <br /> <br /> ಪದವಿ ಪೂರ್ವ ಶಿಕ್ಷಣ ಕರ್ನಾಟಕದ ವಿಶೇಷ ಎಂದು ಪರಿಗಣಿಸಿ ವಿರೋಧಿಸುವುದಾದರೆ ಬೇರೆ ರಾಜ್ಯಗಳ, ಕೇಂದ್ರ ಸರ್ಕಾರದ ಶಿಕ್ಷಣಕ್ರಮ ಅವೈಜ್ಞಾನಿಕವೇ? ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಶಿಕ್ಷಣ ತಜ್ಞರು ಇಲ್ಲವೇ? 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವೀಧರರು ಬೋಧಿಸಿದರೆ ಶಿಕ್ಷಣದ ಗುಣಮಟ್ಟ ಉತ್ತಮವಾಗುತ್ತದಲ್ಲವೇ? 10ನೇ ತರಗತಿ ಪ್ರವೇಶಿಸುವ ಎಲ್ಲರೂ ಹನ್ನೆರಡನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಾರೆ.<br /> <br /> ಪ್ರೌಢಶಾಲೆಗಳಿರುವ ಕಡೆ ಹನ್ನೆರಡನೇ ತರಗತಿಯ ಆರಂಭವಾಗುತ್ತದೆ. <br /> ಹಳ್ಳಿ ಮತ್ತು ಪಟ್ಟಣದ ಅಸಮಾನತೆಯನ್ನು ದೂರ ಮಾಡಲು ಇದು ನೆರವಾಗುತ್ತದೆ. ನೆರೆಯ ಆಂಧ್ರಪ್ರದೇಶ ತಮಿಳುನಾಡು ರಾಜ್ಯಗಳು ಆರ್ಎಂಎಸ್ಎ ನೀತಿಯನ್ನು ಅಳವಡಿಸಿಕೊಂಡು ಅದರನ್ವಯ ಶಿಕ್ಷಕರ ನೇಮಕಕ್ಕೆ ಮುಂದಾಗಿವೆ. ನಮ್ಮ ರಾಜ್ಯದಲ್ಲೂ ವಿರೋಧಕ್ಕೆ ಅರ್ಥವಿಲ್ಲ. ಆರ್ಎಂಎಸ್ಎ ನೀತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಭಾರತದ ಬಹುತೇಕ ರಾಜ್ಯಗಳು ಅಳವಡಿಸಿಕೊಂಡು 9 ರಿಂದ 12ನೆ ತರಗತಿಯವರೆಗೆ ಪ್ರೌಢ ಶಿಕ್ಷಣವೆಂದು ಗುರುತಿಸಿವೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. <br /> <br /> ಪದವಿ ಪೂರ್ವ ಶಿಕ್ಷಣ ಕರ್ನಾಟಕದ ವಿಶೇಷ ಎಂದು ಪರಿಗಣಿಸಿ ವಿರೋಧಿಸುವುದಾದರೆ ಬೇರೆ ರಾಜ್ಯಗಳ, ಕೇಂದ್ರ ಸರ್ಕಾರದ ಶಿಕ್ಷಣಕ್ರಮ ಅವೈಜ್ಞಾನಿಕವೇ? ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಶಿಕ್ಷಣ ತಜ್ಞರು ಇಲ್ಲವೇ? 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವೀಧರರು ಬೋಧಿಸಿದರೆ ಶಿಕ್ಷಣದ ಗುಣಮಟ್ಟ ಉತ್ತಮವಾಗುತ್ತದಲ್ಲವೇ? 10ನೇ ತರಗತಿ ಪ್ರವೇಶಿಸುವ ಎಲ್ಲರೂ ಹನ್ನೆರಡನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಾರೆ.<br /> <br /> ಪ್ರೌಢಶಾಲೆಗಳಿರುವ ಕಡೆ ಹನ್ನೆರಡನೇ ತರಗತಿಯ ಆರಂಭವಾಗುತ್ತದೆ. <br /> ಹಳ್ಳಿ ಮತ್ತು ಪಟ್ಟಣದ ಅಸಮಾನತೆಯನ್ನು ದೂರ ಮಾಡಲು ಇದು ನೆರವಾಗುತ್ತದೆ. ನೆರೆಯ ಆಂಧ್ರಪ್ರದೇಶ ತಮಿಳುನಾಡು ರಾಜ್ಯಗಳು ಆರ್ಎಂಎಸ್ಎ ನೀತಿಯನ್ನು ಅಳವಡಿಸಿಕೊಂಡು ಅದರನ್ವಯ ಶಿಕ್ಷಕರ ನೇಮಕಕ್ಕೆ ಮುಂದಾಗಿವೆ. ನಮ್ಮ ರಾಜ್ಯದಲ್ಲೂ ವಿರೋಧಕ್ಕೆ ಅರ್ಥವಿಲ್ಲ. ಆರ್ಎಂಎಸ್ಎ ನೀತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>