ಯಲಹಂಕ ವಲಯದಲ್ಲಿ ಬೋರ್ವೆಲ್ಗಳು ಕೆಟ್ಟು ವರ್ಷಗಳಾದರೂ ರಿಪೇರಿಯಾಗಿಲ್ಲ. ಇಲ್ಲಿನ ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರವಿರುವ ಕೋಟೆ ಬೀದಿಯ ದುಃಸ್ಥಿತಿ ಇದು. ಇಲ್ಲಿನ ಜನರು ಸುಮಾರು 6 ತಿಂಗಳುಗಳಿಂದ ದಿನವೂ ಖಾಸಗಿಯವರಿಂದ ಪ್ರತಿ ಬಿಂದಿಗೆಗೆ 1.50 ರೂಪಾಯಿ ಕೊಟ್ಟು ನೀರನ್ನು ಕೊಂಡುಕೊಳ್ಳುತ್ತಿದ್ದಾರೆ.
ಇನ್ನಾದರೂ ಯಲಹಂಕ ವಲಯದ ಅಧಿಕಾರಿಗಳು ತಮ್ಮ ಚಿತ್ತವನ್ನು ಈ ಹಳೆಯ ನೀರಿನ ಬೋರ್ವೆಲ್ ಕಡೆಗೆ ಹರಿಸಿ ಕೋಟೆಬೀದಿಯ ಜನರ ನೀರಿನ ದಾಹ ನೀಗಿಸಲಿ.