ಪ್ರಜಾವಾಣಿ ಏ 14ರ ಸಂಚಿಕೆಯ ಪುಟ 4 ರಲ್ಲಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸುತ್ತಿರುವ ಚಿತ್ರ ಪ್ರಕಟವಾಗಿದೆ.
ಸಿದ್ದರಾಮಯ್ಯ ತಮ್ಮ ಬಲಗೈಯಲ್ಲಿ ನಿಂಬೆ ಹಣ್ಣೊಂದನ್ನು ಹಿಡಿದು ತಮ್ಮ ಮುಖ್ಯಮಂತ್ರಿ ಕುರ್ಚಿಗೆ ಮುಟ್ಟಿಸುತ್ತಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅವರು ಪ್ರಮಾಣ ವಚನ ಸ್ವೀಕರಿಸಿದ್ದೂ ಸಹ ರಾಹುಕಾಲ ಕಳೆದ ನಂತರವಷ್ಟೆ! ಸಿದ್ದರಾಮಯ್ಯನವರು ಭವಿಷ್ಯವನ್ನು, ಮೂಢನಂಬಿಕೆಗಳನ್ನು ನಂಬುವವರಲ್ಲವೆಂದು ಅವರೇ ಹೇಳಿದ್ದಾರೆ! ಇದು ಎಷ್ಟರ ಮಟ್ಟಿಗೆ ನಿಜ?