<p>ಪಾಜಕದ ಕುಂಜಾರು ಗಿರಿಯಲ್ಲಿ ಜಾತಿ ಕೇಳಿ ಊಟದಿಂದ ಹೊರಕಳುಹಿಸಿದ ಘಟನೆ ಅಮಾನವೀಯವಾದುದು. ಪಶ್ಚಿಮ ಕರಾವಳಿ ಸಾಲಿನ ದೇವಸ್ಥಾನಗಳಲ್ಲಿ ಈಗಲೂ ಈ ಅನಿಷ್ಟ ಪದ್ಧತಿ, ಬ್ರಾಹ್ಮಣರು- ಬ್ರಾಹ್ಮಣೇತರ ಪಂಕ್ತಿಭೇದ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಇಂಥದೇ ಅನುಭವ, ಕೆಲವು ದೇವಾಲಯಗಳಲ್ಲಿ ನನಗೂ ಆಗಿದೆ.</p>.<p>ಅಪರೂಪಕ್ಕೆ ಯಾರಾದರೂ ಇವರ ಜಾತೀಯತೆಯ ಈ ಕೆಟ್ಟ ಪದ್ಧತಿಯ ಬಗ್ಗೆ ಗಟ್ಟಿಯಾಗಿ ಕೇಳಿದರೆ, ಒಂದು ಸಿದ್ಧ ಉತ್ತರ ಕಾದಿರುತ್ತದೆ. `ವಿಶೇಷ ಪೂಜೆ ಮಾಡಿಸಿದವರು ಅಥವಾ ಹರಕೆ ಹೊತ್ತವರು ತಮ್ಮ ಹಣದಿಂದ ಸಮಾರಾಧನೆ ಮಾಡಿಸುತ್ತಾರೆ. ಅಪರಿಚಿತರು (ಬ್ರಾಹ್ಮಣೇತರರು) ಊಟಕ್ಕೆ ಕೂತರೆ ಎಬ್ಬಿಸಬೇಕಾಗುತ್ತದೆ~ಎಂಬ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಹರಕೆ ಹೊತ್ತವರು ಬ್ರಾಹ್ಮಣರೇ ಆಗಿರುತ್ತಾರೆಯೆ? ಹಾಗೊಂದು ವೇಳೆ ಹರಕೆ ಹೊತ್ತವರು ತಮ್ಮ ಹಣದಿಂದಲೇ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಿದರೂ, ಊಟಕ್ಕೆ ಕೂತ ಬ್ರಾಹ್ಮಣೇತರರನ್ನು ಅರ್ಚಕರೇ ನಿರ್ದಾಕ್ಷಿಣ್ಯವಾಗಿ ಎಬ್ಬಿಸುವ ಪದ್ಧತಿಯನ್ನು ಏಕೆ ಪೋಷಿಸಬೇಕು.</p>.<p>ವಾಸ್ತವವಾಗಿ ಅವರು ಹೇಳುವ ಸಹಭೋಜನವೆಂದರೆ, ಬ್ರಾಹ್ಮಣೇತರರಿಗಾಗಿ ಮಾಡಿದ ವ್ಯವಸ್ಥೆ, ಹರಕೆ ಊಟವೆಂದರೆ ದೇವಸ್ಥಾನದವರೇ ದೇವಸ್ಥಾನದ ಹಣದಿಂದ ಬ್ರಾಹ್ಮಣರಿಗೆ ಮಾತ್ರ ಮಾಡಿದ ವ್ಯವಸ್ಥೆ. ಜಾತಿಭೇದವನ್ನು ಆಚರಿಸಲು ಇತ್ತೀಚೆಗೆ ಈ ಅರ್ಚಕರು ಕಂಡುಕೊಂಡ ಉಪಾಯವೇ ಈ ಹರಕೆ ಅಥವಾ ವಿಶೇಷ ಪೂಜೆ ಊಟ. ಮುಜರಾಯಿ ಇಲಾಖೆ ಇಂಥ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾಜಕದ ಕುಂಜಾರು ಗಿರಿಯಲ್ಲಿ ಜಾತಿ ಕೇಳಿ ಊಟದಿಂದ ಹೊರಕಳುಹಿಸಿದ ಘಟನೆ ಅಮಾನವೀಯವಾದುದು. ಪಶ್ಚಿಮ ಕರಾವಳಿ ಸಾಲಿನ ದೇವಸ್ಥಾನಗಳಲ್ಲಿ ಈಗಲೂ ಈ ಅನಿಷ್ಟ ಪದ್ಧತಿ, ಬ್ರಾಹ್ಮಣರು- ಬ್ರಾಹ್ಮಣೇತರ ಪಂಕ್ತಿಭೇದ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಇಂಥದೇ ಅನುಭವ, ಕೆಲವು ದೇವಾಲಯಗಳಲ್ಲಿ ನನಗೂ ಆಗಿದೆ.</p>.<p>ಅಪರೂಪಕ್ಕೆ ಯಾರಾದರೂ ಇವರ ಜಾತೀಯತೆಯ ಈ ಕೆಟ್ಟ ಪದ್ಧತಿಯ ಬಗ್ಗೆ ಗಟ್ಟಿಯಾಗಿ ಕೇಳಿದರೆ, ಒಂದು ಸಿದ್ಧ ಉತ್ತರ ಕಾದಿರುತ್ತದೆ. `ವಿಶೇಷ ಪೂಜೆ ಮಾಡಿಸಿದವರು ಅಥವಾ ಹರಕೆ ಹೊತ್ತವರು ತಮ್ಮ ಹಣದಿಂದ ಸಮಾರಾಧನೆ ಮಾಡಿಸುತ್ತಾರೆ. ಅಪರಿಚಿತರು (ಬ್ರಾಹ್ಮಣೇತರರು) ಊಟಕ್ಕೆ ಕೂತರೆ ಎಬ್ಬಿಸಬೇಕಾಗುತ್ತದೆ~ಎಂಬ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಹರಕೆ ಹೊತ್ತವರು ಬ್ರಾಹ್ಮಣರೇ ಆಗಿರುತ್ತಾರೆಯೆ? ಹಾಗೊಂದು ವೇಳೆ ಹರಕೆ ಹೊತ್ತವರು ತಮ್ಮ ಹಣದಿಂದಲೇ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಿದರೂ, ಊಟಕ್ಕೆ ಕೂತ ಬ್ರಾಹ್ಮಣೇತರರನ್ನು ಅರ್ಚಕರೇ ನಿರ್ದಾಕ್ಷಿಣ್ಯವಾಗಿ ಎಬ್ಬಿಸುವ ಪದ್ಧತಿಯನ್ನು ಏಕೆ ಪೋಷಿಸಬೇಕು.</p>.<p>ವಾಸ್ತವವಾಗಿ ಅವರು ಹೇಳುವ ಸಹಭೋಜನವೆಂದರೆ, ಬ್ರಾಹ್ಮಣೇತರರಿಗಾಗಿ ಮಾಡಿದ ವ್ಯವಸ್ಥೆ, ಹರಕೆ ಊಟವೆಂದರೆ ದೇವಸ್ಥಾನದವರೇ ದೇವಸ್ಥಾನದ ಹಣದಿಂದ ಬ್ರಾಹ್ಮಣರಿಗೆ ಮಾತ್ರ ಮಾಡಿದ ವ್ಯವಸ್ಥೆ. ಜಾತಿಭೇದವನ್ನು ಆಚರಿಸಲು ಇತ್ತೀಚೆಗೆ ಈ ಅರ್ಚಕರು ಕಂಡುಕೊಂಡ ಉಪಾಯವೇ ಈ ಹರಕೆ ಅಥವಾ ವಿಶೇಷ ಪೂಜೆ ಊಟ. ಮುಜರಾಯಿ ಇಲಾಖೆ ಇಂಥ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>