ಕನ್ನಡ ಪುಸ್ತಕ ಪ್ರಾಧಿಕಾರ ಈ ಹಿಂದೆ ಸಾಮಾನ್ಯ ಓದುಗರಲ್ಲಿ ವಾಚನಾಭಿರುಚಿ ವೃದ್ಧಿಸುವ ಅಂಶಗಳನ್ನು ರೂಢಿಸುವಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಪ್ರತೀ ವರ್ಷ ನೂರಾರು ಹೊಸ ಕೃತಿಗಳು ಲೋಕಾರ್ಪಣೆಗೊಳ್ಳುತ್ತಲೇ ಇವೆ. ವಿಪರ್ಯಾಸದ ಸಂಗತಿಯೆಂದರೆ ಈ ಪುಸ್ತಕಗಳನ್ನು ಓದುವ ಸಹೃದಯರ ಕೊರತೆ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಾ, ಕನ್ನಡ ಪುಸ್ತಕಗಳು ಪಳೆಯುಳಿಕೆಗಳಾಗಿ ಕೊಳೆಯುತ್ತಿವೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ಪಠ್ಯಪುಸ್ತಕ ಓದುವುದೇ ಹೆಚ್ಚಾಗಿ, ಪಠ್ಯೇತರ ಪುಸ್ತಕ ಓದುವ ಪ್ರೇಮ ಕ್ಷೀಣಿಸಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕನ್ನಡ ಸಾಹಿತ್ಯ ಎದುರಿಸುತ್ತಿರುವುದು ಶೋಚನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ನೂತನ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಅವರು ಪ್ರಾಧಿಕಾರಕ್ಕೆ ಹೊಸ ಆಯಾಮ ತಂದುಕೊಡುವ ನಿಟ್ಟಿನಲ್ಲಿ ಸ್ಪಂದಿಸಲಿ.