<p>ಇತ್ತೀಚೆಗೆ ಕೇಂದ್ರ ಯೋಜನಾ ಆಯೋಗವು ದೇಶದ ಮಹಾನಗರಗಳಲ್ಲಿ ದಿನಕ್ಕೆ 32 ರೂಗಳನ್ನು ತಮ್ಮ ದಿನಬಳಕೆಗಾಗಿ ಖರ್ಚು ಮಾಡುವವರು ಬಡವರು.<br /> <br /> ಇದಕ್ಕಿಂತ ಒಂದು ರೂಪಾಯಿ ಜಾಸ್ತಿ ಖರ್ಚು ಮಾಡಿದರೂ ಅವರು ಶ್ರಿಮಂತರು, ಅವರಿಗೆ ಸರ್ಕಾರದ ಯಾವುದೇ ಸಬ್ಸಿಡಿ ಸೌಲಭ್ಯ ಹಾಗು ಬಿಪಿಎಲ್ ಕಾರ್ಡ್ ಕೊಡಬೇಕಾಗಿಲ್ಲ ಎಂಬ ನಗೆಪಾಟಲಿನ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ.<br /> <br /> ದೆಹಲಿ-ಮುಂಬೈಯಂತಹ ಮಹಾನಗರಗಳಲ್ಲಿ ದಿನಕ್ಕೆ 32 ರೂಪಾಯಿಗಳಲ್ಲಿ ಜೀವನ ನಡೆಸುವವರು ಸರ್ಕಾರದ ದೃಷ್ಟಿಯಲ್ಲಿ ಶ್ರಿಮಂತರು. ಯೋಜನಾ ಆಯೋಗದ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಯಾವ ಮಾನದಂಡ ಅನುಸರಿಸಿ ಈ ನಿರ್ಧಾರಕ್ಕೆ ಬಂದರೋ ಆ ದೇವರೇ ಬಲ್ಲ. <br /> <br /> ಆಯೋಗವು ನೀಡಿದ ಅಂಕಿ ಅಂಶಗಳನ್ನು ಅವಲೊಕಿಸಿದರೆ ಯಾರಿಗೆ ಆಗಲಿ ತಲೆತಿರುಗುವುದು ಗ್ಯಾರಂಟಿ.ಆಯೋಗವು ಪ್ರಧಾನಿಯವರ ಅನುಮತಿ ಪಡೆದು ಈ ವರದಿಯನ್ನು ಸಲ್ಲಿಸಿದೆ. <br /> <br /> ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ಜನಪರ ಕಾಳಜಿ ಎಷ್ಟಿದೆಯೆನ್ನುವುದು ಇದರಿಂದ ವ್ಯಕ್ತವಾಗುತ್ತದೆ. ಬೆಲೆಯೇರಿಕೆ ಬಿಸಿಯಿಂದ ಬೆಂದು ಬಸವಳಿಯುತ್ತಿರುವ ಜನರಿಗೆ ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.<br /> <br /> ಜಾಗತಿಕ ಮಟ್ಟದಲ್ಲಿ ಭಾರತದ ಬಡಜನರ ಸಂಖ್ಯೆಯನ್ನು ಕಡಿಮೆ ತೋರಿಸುವ ಹಪಾಹಪಿಯಲ್ಲಿ ಸಾಮಾನ್ಯ ಜನರ ತಲೆಮೇಲೆ ಕಲ್ಲುಚಪ್ಪಡಿಯನ್ನು ಹಾಕ ಹೊರಟಿರುವ ಸರ್ಕಾರದ ಈ ಕ್ರಮ ಖಂಡನಾರ್ಹ. <br /> <br /> ಈ ಹಿಂದೆ ಜೀವನ ನಿರ್ವಹಣೆಗೆ 20 ರೂಪಾಯಿ ಸಾಕು ಇದರಿಂದ 2100 ಕ್ಯಾಲೊರಿಯ ಆಹಾರವನ್ನು ಸೇವಿಸಲು ಆತ ಅರ್ಹ ಎಂಬ ಅಸಂಬದ್ಧ ವರದಿ ಸಲ್ಲಿಸಿದ್ದ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಪಾಳಮೋಕ್ಷ ಮಾಡಿದ ನಂತರ ಭಾರತದ ಬಡವನ ಪುಣ್ಯ ಎಂಬಂತೆ 32 ರೂಪಾಯಿಗಳ ಅಂಕಿ-ಅಂಶ ನೀಡಿದೆ. ಇದು ನಮ್ಮ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. <br /> <br /> ಯೋಜನಾ ಆಯೋಗದ ಅಧಿಕಾರಿಗಳು ಬಡಜನರ ಬಾಳನ್ನು ಹಸನು ಮಾಡುವ, ಅವರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವ ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೆ ತರುವತ್ತ ಗಮನಹರಿಸುವ ಬದಲು ಅವರ ಜೀವನವನ್ನು ಇನ್ನಷ್ಟು ದುರ್ಬರಗೊಳಿಸಲು ಹೊರಟಿರುವುದು ವಿಪರ್ಯಾಸ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚೆಗೆ ಕೇಂದ್ರ ಯೋಜನಾ ಆಯೋಗವು ದೇಶದ ಮಹಾನಗರಗಳಲ್ಲಿ ದಿನಕ್ಕೆ 32 ರೂಗಳನ್ನು ತಮ್ಮ ದಿನಬಳಕೆಗಾಗಿ ಖರ್ಚು ಮಾಡುವವರು ಬಡವರು.<br /> <br /> ಇದಕ್ಕಿಂತ ಒಂದು ರೂಪಾಯಿ ಜಾಸ್ತಿ ಖರ್ಚು ಮಾಡಿದರೂ ಅವರು ಶ್ರಿಮಂತರು, ಅವರಿಗೆ ಸರ್ಕಾರದ ಯಾವುದೇ ಸಬ್ಸಿಡಿ ಸೌಲಭ್ಯ ಹಾಗು ಬಿಪಿಎಲ್ ಕಾರ್ಡ್ ಕೊಡಬೇಕಾಗಿಲ್ಲ ಎಂಬ ನಗೆಪಾಟಲಿನ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ.<br /> <br /> ದೆಹಲಿ-ಮುಂಬೈಯಂತಹ ಮಹಾನಗರಗಳಲ್ಲಿ ದಿನಕ್ಕೆ 32 ರೂಪಾಯಿಗಳಲ್ಲಿ ಜೀವನ ನಡೆಸುವವರು ಸರ್ಕಾರದ ದೃಷ್ಟಿಯಲ್ಲಿ ಶ್ರಿಮಂತರು. ಯೋಜನಾ ಆಯೋಗದ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಯಾವ ಮಾನದಂಡ ಅನುಸರಿಸಿ ಈ ನಿರ್ಧಾರಕ್ಕೆ ಬಂದರೋ ಆ ದೇವರೇ ಬಲ್ಲ. <br /> <br /> ಆಯೋಗವು ನೀಡಿದ ಅಂಕಿ ಅಂಶಗಳನ್ನು ಅವಲೊಕಿಸಿದರೆ ಯಾರಿಗೆ ಆಗಲಿ ತಲೆತಿರುಗುವುದು ಗ್ಯಾರಂಟಿ.ಆಯೋಗವು ಪ್ರಧಾನಿಯವರ ಅನುಮತಿ ಪಡೆದು ಈ ವರದಿಯನ್ನು ಸಲ್ಲಿಸಿದೆ. <br /> <br /> ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ಜನಪರ ಕಾಳಜಿ ಎಷ್ಟಿದೆಯೆನ್ನುವುದು ಇದರಿಂದ ವ್ಯಕ್ತವಾಗುತ್ತದೆ. ಬೆಲೆಯೇರಿಕೆ ಬಿಸಿಯಿಂದ ಬೆಂದು ಬಸವಳಿಯುತ್ತಿರುವ ಜನರಿಗೆ ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.<br /> <br /> ಜಾಗತಿಕ ಮಟ್ಟದಲ್ಲಿ ಭಾರತದ ಬಡಜನರ ಸಂಖ್ಯೆಯನ್ನು ಕಡಿಮೆ ತೋರಿಸುವ ಹಪಾಹಪಿಯಲ್ಲಿ ಸಾಮಾನ್ಯ ಜನರ ತಲೆಮೇಲೆ ಕಲ್ಲುಚಪ್ಪಡಿಯನ್ನು ಹಾಕ ಹೊರಟಿರುವ ಸರ್ಕಾರದ ಈ ಕ್ರಮ ಖಂಡನಾರ್ಹ. <br /> <br /> ಈ ಹಿಂದೆ ಜೀವನ ನಿರ್ವಹಣೆಗೆ 20 ರೂಪಾಯಿ ಸಾಕು ಇದರಿಂದ 2100 ಕ್ಯಾಲೊರಿಯ ಆಹಾರವನ್ನು ಸೇವಿಸಲು ಆತ ಅರ್ಹ ಎಂಬ ಅಸಂಬದ್ಧ ವರದಿ ಸಲ್ಲಿಸಿದ್ದ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಪಾಳಮೋಕ್ಷ ಮಾಡಿದ ನಂತರ ಭಾರತದ ಬಡವನ ಪುಣ್ಯ ಎಂಬಂತೆ 32 ರೂಪಾಯಿಗಳ ಅಂಕಿ-ಅಂಶ ನೀಡಿದೆ. ಇದು ನಮ್ಮ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. <br /> <br /> ಯೋಜನಾ ಆಯೋಗದ ಅಧಿಕಾರಿಗಳು ಬಡಜನರ ಬಾಳನ್ನು ಹಸನು ಮಾಡುವ, ಅವರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವ ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೆ ತರುವತ್ತ ಗಮನಹರಿಸುವ ಬದಲು ಅವರ ಜೀವನವನ್ನು ಇನ್ನಷ್ಟು ದುರ್ಬರಗೊಳಿಸಲು ಹೊರಟಿರುವುದು ವಿಪರ್ಯಾಸ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>