ಬೆಂಗಳೂರಿನಲ್ಲಿ ಸೂಕ್ತ ಕಸ ವಿಂಗಡಣೆಗಾಗಿ ಪ್ರತಿ ಮನೆಯೂ ಎರಡು ಬುಟ್ಟಿ ಮತ್ತು ಒಂದು ಚೀಲವನ್ನು ಹೊಂದಿರಬೇಕೆಂಬ ಹೊಸ ಸೂತ್ರದ ಯೋಜನೆ ತುಂಬಾ ಸೂಕ್ತವಾಗಿದೆ. ಆದರೆ ಇವುಗಳ ಮುಚ್ಚಳಗಳು ತುಂಬಾ ಭದ್ರವಾಗಿದ್ದು ಬೀದಿನಾಯಿ, ಬೆಕ್ಕು, ಕಾಗೆಗಳು, ಎಲ್ಲಕ್ಕಿಂತ ಹೆಚ್ಚಾಗಿ ಹೆಗ್ಗಣಗಳು ತೆಗೆಯಲು ಸಾಧ್ಯವಿಲ್ಲದಂತೆ ಇರಬೇಕಾದುದು ಅತಿ ಮುಖ್ಯ.
ಕಸ ತೆಗೆದುಕೊಂಡು ಹೋಗುವವರು ಬರುವ ಹೊತ್ತಿನಲ್ಲಿ ಮನೆಯಲ್ಲಿ ಯಾರಾದರೂ ಒಬ್ಬರು ಕಡ್ಡಾಯವಾಗಿ ಇರುವುದಂತೂ ಅಸಾಧ್ಯ. ಆದ್ದರಿಂದ ನಾವು ಬಳಸುವ ಕಂಟೇನರ್ ಜನಸಾಮಾನ್ಯರ ಕೈಗೆ ಎಟುಕುವಷ್ಟು ಬೆಲೆಯದ್ದಾಗಿರಬೇಕಾಗುತ್ತದೆ. ಆಗ ಯೋಜನೆ ಸಫಲವಾಗುತ್ತದೆ.