ಮೊನ್ನೆ ನನ್ನ ಗೆಳೆಯರೊಬ್ಬರ ಮಗಳ ನಿಶ್ಚಿತಾರ್ಥಕ್ಕೆ ಹೋಗಿದ್ದೆ. ಸಮಾರಂಭ ತುಂಬಾ ಅಚ್ಚುಕಟ್ಟಾಗಿತ್ತು. ಭೋಜನ ವ್ಯವಸ್ಥೆಯು ನವಭಕ್ಷ್ಯ ಭೋಜ್ಯಗಳಿಂದ ತುಂಬಿತ್ತು.
ಎಲ್ಲ ಮುಗಿದ ಮೇಲೆ ಹೊರಡುವ ಮುನ್ನ ಫಲತಾಂಬೂಲ ಮತ್ತು ಅದಕ್ಕೂ ಮಿಗಿಲಾಗಿ ಗೆಳೆಯ ಚಿರಂಜೀವಿ ವೆಂಕಟೇಶ ಪ್ರಸಾದ್ ಎಲ್ಲರ ಕೈಗೆ ಒಂದು ಪ್ಲಾಸ್ಟಿಕ್ ಲಕೋಟೆಯಲ್ಲಿ ಗಿಡದ ಸಸಿ ನೀಡಿದ. ಅಂದು ಪರಿಸರ ದಿನ. ಸಮಾರಂಭಕ್ಕಿಂತ ಎಲ್ಲರ ಮೆಚ್ಚುಗೆ ಗಳಿಸಿದ್ದು ಇಂಥ ಪರಿಸರ ಪ್ರಜ್ಞೆ!
–ಕೆ. ಎನ್. ಹರಿಹರ
ಬೆಂಗಳೂರು