ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ದೊಡ್ಡ ಶಕ್ತಿಯಾಗಿ, ಆಡಳಿತ ನಡೆಸುತ್ತಿವೆ. ಉಪೇಂದ್ರ ಅವರ ಹೊಸ ಪಕ್ಷವು ರಾಜ್ಯದಲ್ಲಿ ಬೃಹತ್ ಶಕ್ತಿಯಾಗುವುದು ಎಂದು ಯಾರೂ ಭಾವಿಸಿರಲಾರರು. ಆದರೆ ಪರ್ಯಾಯ ರಾಜಕಾರಣದ ನಿಟ್ಟಿನಲ್ಲಿ ಒಂದು ಪ್ರಯತ್ನ ಆಗಬಹುದು ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರ ಈಗ ಬುಡಮೇಲಾಗಿದೆ. ಇದು ಕರ್ನಾಟಕ ರಾಜಕೀಯದ ದುರಂತ ಎನ್ನಬಹುದು.