ಮಳೆನೀರು ಸಂಗ್ರಹ ಕಡ್ಡಾಯಗೊಳಿಸುವ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಈ ತಿದ್ದುಪಡಿಯ ಅಗತ್ಯ ಏನಾದರೂ ಆಗಿರಲಿ.ಆದರೆ ಮಳೆನೀರು ಸಂಗ್ರಹ ಅಗತ್ಯವಾಗಿ ಆಗಬೇಕಾಗಿರುವ ಕೆಲಸ. ದಂಡ ಭಯದ ಮೂಲಕವಾದರೂ ಅದನ್ನು ಜಾರಿಗೆ ತರಬೇಕಾದುದು ಅನಿವಾರ್ಯ.
ಮಳೆ ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದರಿಂದ ಆಗುವ ವಿವಿಧ ಪ್ರಯೋಜನಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅಗತ್ಯ. ಬಹಳ ದೂರದಿಂದ ನಗರಗಳಿಗೆ ನೀರು ಪೂರೈಸುವ ಹೊರೆ ಕೂಡ ಇಳಿಸಬಹುದು. ನೀರನ್ನು ಇಂಗಿಸಿದರೆ ಜಲ ಮರುಪೂರಣ ಆಗುತ್ತದೆ. ಅಂತರ್ಜಲ ಮಟ್ಟ ಏರುತ್ತದೆ. ಹೀಗಾಗಿ ಮಳೆನೀರು ಸಂಗ್ರಹಕ್ಕೆ ಜನರು ಮುಂದಾಗಬೇಕು. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು.