<p>ನಿತೀಶ್ಕುಮಾರ್ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ನೀಡಬೇಕು ಎಂದು ಹೇಳಿದ್ದಾರೆ. ಅದು ಅವರ ಮನದಾಳದ ಆಶಯವೋ ಅಥವಾ ತಾವು ಪಕ್ಷಾತೀತರೆಂದು ತೋರಿಸಿಕೊಳ್ಳುವ ಕಾತರವೋ, ಯು.ಪಿ.ಎ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ರಾಜಕಾರಣವೋ ಒಂದೂ ಅರ್ಥವಾಗುತ್ತಿಲ್ಲ.<br /> <br /> ಬಿ.ಆರ್.ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಿದ ನಂತರ ಈ ಪುರಸ್ಕಾರಕ್ಕೆ ಘನತೆ ಹೆಚ್ಚಿದ್ದು ನಿಜ. ಅಂತೆಯೇ ಈ ರಾಷ್ಟ್ರದಲ್ಲಿ ಅಸಮಾನತೆಗಳನ್ನು ಅಳಿಸಲು ಪ್ರಯತ್ನಿಸಿದ ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ, ಪೆರಿಯಾರ್, ಲೋಹಿಯಾ, ಕಾನ್ಶಿರಾಂರಂತಹ ಅನೇಕರಿಗೆ ಈ ಪುರಸ್ಕಾರ ದಕ್ಕಬೇಕಿದ್ದು ಈವರೆಗೆ ದಕ್ಕದೇ ಇದ್ದದ್ದಕ್ಕೆ ಕಾರಣಗಳನ್ನು ಹುಡುಕಬೇಕಿಲ್ಲವಷ್ಟೆ.<br /> <br /> ಆದರೆ ಕಾಂಗ್ರೆಸ್ನವರೇ ಆಗಿದ್ದು ತನ್ನ ಒಡಲಲ್ಲಿ ಅಂಬೇಡ್ಕರ್, ಫುಲೆ, ಪೆರಿಯಾರ್ ಅವರನ್ನು ಇಟ್ಟುಕೊಂಡು ಈ ನೆಲದ ಅಸಹಾಯಕ ವರ್ಗಗಳಿಗೆ ಧ್ವನಿ ನೀಡಿದ್ದು ದೇವರಾಜ ಅರಸು ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಅರಸು ಇಲ್ಲಿ ಹುಟ್ಟಿರದಿದ್ದರೆ ಇಲ್ಲಿನ ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ಪರಿಸ್ಥಿತಿ ಕಲ್ಪಿಸಿಕೊಳ್ಳಲಿಕ್ಕೂ ಕಷ್ಟವಾಗಿರುತ್ತಿತ್ತು.<br /> <br /> ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲಿಕ್ಕೂ ಅರಸರ ಕಾಣ್ಕೆ ಪ್ರತ್ಯಕ್ಷವಾಗೋ, ಪರೋಕ್ಷವಾಗೋ ಇದ್ದೇ ಇದೆ. ಅವರು ತಮ್ಮ ಸಚಿವ ಸಂಪುಟದಲ್ಲಿ ಅರಸರಿಗೆ ಭಾರತರತ್ನ ನೀಡಬೇಕೆಂಬ ನಿರ್ಣಯ ಅಂಗೀಕರಿಸಿ ಅವರದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟರೆ, ದಕ್ಕುವುದು ಅಸಾಧ್ಯವಾಗುವುದಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಿತೀಶ್ಕುಮಾರ್ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ನೀಡಬೇಕು ಎಂದು ಹೇಳಿದ್ದಾರೆ. ಅದು ಅವರ ಮನದಾಳದ ಆಶಯವೋ ಅಥವಾ ತಾವು ಪಕ್ಷಾತೀತರೆಂದು ತೋರಿಸಿಕೊಳ್ಳುವ ಕಾತರವೋ, ಯು.ಪಿ.ಎ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ರಾಜಕಾರಣವೋ ಒಂದೂ ಅರ್ಥವಾಗುತ್ತಿಲ್ಲ.<br /> <br /> ಬಿ.ಆರ್.ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಿದ ನಂತರ ಈ ಪುರಸ್ಕಾರಕ್ಕೆ ಘನತೆ ಹೆಚ್ಚಿದ್ದು ನಿಜ. ಅಂತೆಯೇ ಈ ರಾಷ್ಟ್ರದಲ್ಲಿ ಅಸಮಾನತೆಗಳನ್ನು ಅಳಿಸಲು ಪ್ರಯತ್ನಿಸಿದ ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ, ಪೆರಿಯಾರ್, ಲೋಹಿಯಾ, ಕಾನ್ಶಿರಾಂರಂತಹ ಅನೇಕರಿಗೆ ಈ ಪುರಸ್ಕಾರ ದಕ್ಕಬೇಕಿದ್ದು ಈವರೆಗೆ ದಕ್ಕದೇ ಇದ್ದದ್ದಕ್ಕೆ ಕಾರಣಗಳನ್ನು ಹುಡುಕಬೇಕಿಲ್ಲವಷ್ಟೆ.<br /> <br /> ಆದರೆ ಕಾಂಗ್ರೆಸ್ನವರೇ ಆಗಿದ್ದು ತನ್ನ ಒಡಲಲ್ಲಿ ಅಂಬೇಡ್ಕರ್, ಫುಲೆ, ಪೆರಿಯಾರ್ ಅವರನ್ನು ಇಟ್ಟುಕೊಂಡು ಈ ನೆಲದ ಅಸಹಾಯಕ ವರ್ಗಗಳಿಗೆ ಧ್ವನಿ ನೀಡಿದ್ದು ದೇವರಾಜ ಅರಸು ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಅರಸು ಇಲ್ಲಿ ಹುಟ್ಟಿರದಿದ್ದರೆ ಇಲ್ಲಿನ ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ಪರಿಸ್ಥಿತಿ ಕಲ್ಪಿಸಿಕೊಳ್ಳಲಿಕ್ಕೂ ಕಷ್ಟವಾಗಿರುತ್ತಿತ್ತು.<br /> <br /> ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲಿಕ್ಕೂ ಅರಸರ ಕಾಣ್ಕೆ ಪ್ರತ್ಯಕ್ಷವಾಗೋ, ಪರೋಕ್ಷವಾಗೋ ಇದ್ದೇ ಇದೆ. ಅವರು ತಮ್ಮ ಸಚಿವ ಸಂಪುಟದಲ್ಲಿ ಅರಸರಿಗೆ ಭಾರತರತ್ನ ನೀಡಬೇಕೆಂಬ ನಿರ್ಣಯ ಅಂಗೀಕರಿಸಿ ಅವರದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟರೆ, ದಕ್ಕುವುದು ಅಸಾಧ್ಯವಾಗುವುದಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>