<p>ಜ್ಯೋತಿಷಶಾಸ್ತ್ರ ಮುಂತಾದ ಮೂಢನಂಬಿಕೆಗಳೆಲ್ಲಾ ತೀರಾ ವಯಕ್ತಿಕ ವಿಷಯಗಳು. ಕೆಲವರು ಅದನ್ನು ವಂಚನೆಯ ಮತ್ತು ಸಂಪಾದನೆಗಾಗಿ ಬಳಸಿಕೊಂಡರೆ ಮತ್ತೆ ಕೆಲವರು ಅಂತಹ ವಂಚನೆಗೆ ನಿತ್ಯ ತಲೆ ಕೊಡುತ್ತಲೇ ಜೀವನ ಸವೆಸುತ್ತಾರೆ. <br /> <br /> ಒಟ್ಟಿನಲ್ಲಿ ಇವರ ಸಂಖ್ಯೆ ಸಮಾಜದಲ್ಲಿ ತೀರಾ ಕಮ್ಮಿ. ಪ್ರಶ್ನೆ ಏನೆಂದರೆ ಇಂತಹ ವಂಚನೆಯ ವಯಕ್ತಿಕ ವಿಷಯಗಳನ್ನು ಸಾರ್ವತ್ರೀಕರಣಗೊಳಿಸುತ್ತಿರುವುದು ದುರಂತ. <br /> <br /> ಇಡೀ ಒಂದು ಜಿಲ್ಲೆಯೇ ಶಾಪಗ್ರಸ್ತವಾಗಿದೆ ಎಂದು ಅದರ ಶಾಪವನ್ನು ಬಿಡಿಸುತ್ತೇವೆಂದು ಸರ್ಕಾರಿ ಬೊಕ್ಕಸದ ವೆಚ್ಚದಲ್ಲಿ ಮಾಡುತ್ತಿರುವುದು ವಿಪರ್ಯಾಸ.<br /> <br /> ರಾಜ್ಯದ ಬೊಕ್ಕಸದ ಹಣವನ್ನು ಇಂತಹ ವಂಚನೆಯ, ಮೂಢನಂಬಿಕೆಗೆ ಬಳಸಿ ಬರೋಬ್ಬರಿ 12 ಲಕ್ಷ ರೂಪಾಯಿಯ ದುಂದುವೆಚ್ಚದ ಕ್ರಿಯೆ ನಡೆದಿರುವುದು ಚಾಮರಾಜನಗರದಲ್ಲಿ. ಅದೂ ಆ ನಗರದ ಹಿತಚಿಂತನೆಯ ಹೆಸರಲ್ಲಿ! ನಮ್ಮ ಜಿಲ್ಲೆ ಶಾಪಗ್ರಸ್ತವಲ್ಲ, ನಾವು ಶಾಪಗ್ರಸ್ತ ಜನರಲ್ಲ ಎಂದು ಜನರು ಎದೆ ತಟ್ಟಿ ಸ್ವಾಭಿಮಾನಿಗಳಾಗಿ ಇದನ್ನೆಲ್ಲ ಪ್ರತಿಭಟಿಸಬೇಕಿತ್ತು.<br /> <br /> ಲಕ್ಷಾಂತರ ರೂಪಾಯಿಯನ್ನು ಸರ್ಕಾರ ಖರ್ಚು ಮಾಡಬೇಕಿರುತುವುದು ಹೋಮಹವನಕ್ಕಲ್ಲ! ನಮ್ಮೂರಿನ ಕಿತ್ತುಹೋದ ರಸ್ತೆಗಳಿಗೆ, ಕೊಠಡಿಗಳಿಲ್ಲದ ಶಾಲೆಗಳಿಗೆ, ಶೌಚಾಲಯಗಳಿಲ್ಲದ ಮನೆಗಳಿಗೆ, ಸೂರಿಲ್ಲದ ಬಡವರಿಗೆ ಎಂಬುದನ್ನು ಸರ್ಕಾರದ ಕಿವಿ ಕಿತ್ತು ಹೋಗುವ ಹಾಗೆ ಕೂಗಿ ಹೇಳಬೇಕಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜ್ಯೋತಿಷಶಾಸ್ತ್ರ ಮುಂತಾದ ಮೂಢನಂಬಿಕೆಗಳೆಲ್ಲಾ ತೀರಾ ವಯಕ್ತಿಕ ವಿಷಯಗಳು. ಕೆಲವರು ಅದನ್ನು ವಂಚನೆಯ ಮತ್ತು ಸಂಪಾದನೆಗಾಗಿ ಬಳಸಿಕೊಂಡರೆ ಮತ್ತೆ ಕೆಲವರು ಅಂತಹ ವಂಚನೆಗೆ ನಿತ್ಯ ತಲೆ ಕೊಡುತ್ತಲೇ ಜೀವನ ಸವೆಸುತ್ತಾರೆ. <br /> <br /> ಒಟ್ಟಿನಲ್ಲಿ ಇವರ ಸಂಖ್ಯೆ ಸಮಾಜದಲ್ಲಿ ತೀರಾ ಕಮ್ಮಿ. ಪ್ರಶ್ನೆ ಏನೆಂದರೆ ಇಂತಹ ವಂಚನೆಯ ವಯಕ್ತಿಕ ವಿಷಯಗಳನ್ನು ಸಾರ್ವತ್ರೀಕರಣಗೊಳಿಸುತ್ತಿರುವುದು ದುರಂತ. <br /> <br /> ಇಡೀ ಒಂದು ಜಿಲ್ಲೆಯೇ ಶಾಪಗ್ರಸ್ತವಾಗಿದೆ ಎಂದು ಅದರ ಶಾಪವನ್ನು ಬಿಡಿಸುತ್ತೇವೆಂದು ಸರ್ಕಾರಿ ಬೊಕ್ಕಸದ ವೆಚ್ಚದಲ್ಲಿ ಮಾಡುತ್ತಿರುವುದು ವಿಪರ್ಯಾಸ.<br /> <br /> ರಾಜ್ಯದ ಬೊಕ್ಕಸದ ಹಣವನ್ನು ಇಂತಹ ವಂಚನೆಯ, ಮೂಢನಂಬಿಕೆಗೆ ಬಳಸಿ ಬರೋಬ್ಬರಿ 12 ಲಕ್ಷ ರೂಪಾಯಿಯ ದುಂದುವೆಚ್ಚದ ಕ್ರಿಯೆ ನಡೆದಿರುವುದು ಚಾಮರಾಜನಗರದಲ್ಲಿ. ಅದೂ ಆ ನಗರದ ಹಿತಚಿಂತನೆಯ ಹೆಸರಲ್ಲಿ! ನಮ್ಮ ಜಿಲ್ಲೆ ಶಾಪಗ್ರಸ್ತವಲ್ಲ, ನಾವು ಶಾಪಗ್ರಸ್ತ ಜನರಲ್ಲ ಎಂದು ಜನರು ಎದೆ ತಟ್ಟಿ ಸ್ವಾಭಿಮಾನಿಗಳಾಗಿ ಇದನ್ನೆಲ್ಲ ಪ್ರತಿಭಟಿಸಬೇಕಿತ್ತು.<br /> <br /> ಲಕ್ಷಾಂತರ ರೂಪಾಯಿಯನ್ನು ಸರ್ಕಾರ ಖರ್ಚು ಮಾಡಬೇಕಿರುತುವುದು ಹೋಮಹವನಕ್ಕಲ್ಲ! ನಮ್ಮೂರಿನ ಕಿತ್ತುಹೋದ ರಸ್ತೆಗಳಿಗೆ, ಕೊಠಡಿಗಳಿಲ್ಲದ ಶಾಲೆಗಳಿಗೆ, ಶೌಚಾಲಯಗಳಿಲ್ಲದ ಮನೆಗಳಿಗೆ, ಸೂರಿಲ್ಲದ ಬಡವರಿಗೆ ಎಂಬುದನ್ನು ಸರ್ಕಾರದ ಕಿವಿ ಕಿತ್ತು ಹೋಗುವ ಹಾಗೆ ಕೂಗಿ ಹೇಳಬೇಕಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>