‘ಕನ್ನಡಿಗರೇನು ಬಳೆ ತೊಟ್ಟಿಲ್ಲ, ಹುಷಾರ್’. ಉದ್ಧವ್ ಠಾಕ್ರೆ ಹೇಳಿಕೆಗೆ ವಾಟಾಳ್ ನಾಗರಾಜ್ ಕಿಡಿಕಾರಿದ್ದೇನೋ ಸರಿ (ಪ್ರ.ವಾ., ಆ. 6). ಆದರೆ ‘ಬಳೆ ತೊಡುವುದು’ ಅಂದರೆ ದೌರ್ಬಲ್ಯ, ಅಸಹಾಯಕತೆ, ಹೇಡಿತನದ ಪ್ರತೀಕವೆ? ಸಮಾನತೆಯ ಈ ಯುಗದಲ್ಲಿ ಹೆಣ್ಣು ಪ್ರವೇಶಿಸದ ಯಾವ ಕ್ಷೇತ್ರವೂ ಉಳಿದಿಲ್ಲ. ಬಳೆ ತೊಟ್ಟ ಹೆಣ್ಣು ಅಬಲೆ, ಪರಾಧೀನೆ ಎಂಬ ಪರಂಪರಾಗತ ಭಾವನೆ, ಮನುವಾದದ ದೃಷ್ಟಿಕೋನ.