<p>ಚಿತ್ರದುರ್ಗವು ಐತಿಹಾಸಿಕ ಮತ್ತು ಚಾರಿತ್ರಿಕ ಹಿನ್ನೆಲೆ ಹೊಂದಿದ್ದು, ಕರ್ನಾಟಕದಲ್ಲೇ ತನ್ನದೇ ಆದ ಛಾಪು ಮೂಡಿಸಿ, `ಏಳು ಸುತ್ತಿನ ಕೋಟೆ~ ಹೊಂದಿ ಪ್ರಖ್ಯಾತಿ ಹೊಂದಿದೆ. <br /> <br /> `ಒನಕೆ ಓಬವ್ವ~ ಯಾರಿಗೆ ಗೊತ್ತಿಲ್ಲ? ರಾಜ್ಯ ಸರ್ಕಾರವು ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಜಿಲ್ಲೆಗಳಲ್ಲಿ ಉತ್ಸವಗಳನ್ನು ಆಚರಿಸಲು ತೀರ್ಮಾನಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 1991 ರಲ್ಲಿ ದುರ್ಗೋತ್ಸವ ಆಚರಿಸಲಾಯಿತು.<br /> <br /> ಆನಂತರ 1992 ರಲ್ಲಿ ಪ್ರತಿ ವರ್ಷ ಉತ್ಸವವನ್ನು ಆಚರಿಸಬೇಕೆಂಬ ತೀರ್ಮಾನದ ಹಿನ್ನೆಲೆಯಲ್ಲಿ ವೈಭವೋಪೇತವಾಗಿ ಆಚರಿಸಲು ನಿರ್ಣಯಿಸಲಾಗಿತ್ತು. ಆದರೆ ಆ ವರ್ಷ ಪ್ರಾರಂಭಿಕ ತಯಾರಿ ಮಾಡಲಾಗಿದ್ದರೂ ಅತಿವೃಷ್ಟಿಯಿಂದ ಉತ್ಸವ ಮುಂದೂಡಲಾಯಿತು. ನಂತರ ಅದು ಹಾಗೆಯೇ ಸತತವಾಗಿ ಒಂದಲ್ಲಾ ಒಂದು ಕಾರಣದಿಂದ 6 ವರ್ಷಗಳ ಕಾಲ ಮುಂದೂಡಲ್ಪಡುತ್ತಾ ಬಂದಿತು. <br /> <br /> 1998 ರಲ್ಲಿ ಸ್ವಲ್ಪ ಮಟ್ಟಿಗೆ ಬರಗಾಲದ ಛಾಯೆಯಿದ್ದರೂ, ಹಲವಾರು ಅಡಚಣೆಗಳು ಬಂದರೂ ಚಿತ್ರದುರ್ಗದ ಹಿರಿಮೆ, ಪರಂಪರೆ, ಸಂಸ್ಕೃತಿಗಳ ಬಗ್ಗೆ ಅಭಿಮಾನ ಹೊಂದಿರುವ ಹಿರಿಯರು `ದುರ್ಗೋತ್ಸವ 98~ ರಲ್ಲಿ ಆಚರಿಸಲು ಸಹಕಾರಿಯಾದರು! <br /> <br /> ಚಿತ್ರದುರ್ಗದ ಅಭಿವೃದ್ಧಿಗೆ ಪೂರಕವಾಗಿ ಹಮ್ಮಿಕೊಂಡಿದ್ದ `ಪ್ರವಾಸೋದ್ಯಮ~ ಹಾಗೂ `ಜಿಲ್ಲಾ ಅಭಿವೃದ್ಧಿ~ ಕುರಿತ ವಿಚಾರ ಸಂಕಿರಣಗಳು ಮತ್ತು ಕವಿಗೋಷ್ಠಿ ತಮ್ಮದೇ ಆದ ಅರ್ಥಪೂರ್ಣ ಕಳೆ ನೀಡಿದವು.<br /> <br /> ಅಂದಿನಿಂದ ನಡೆದು ಬಂದ ಆಚರಣೆ ಇಂದಿಗೂ ಕೂಡ ಹಂಪಿ, ಬಾದಾಮಿ, ಮೈಸೂರು, ಕಿತ್ತೂರು, ಇನ್ನಿತರೆ ಪ್ರವಾಸಿ ತಾಣಗಳಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಜಿಲ್ಲಾ ಉತ್ಸವ ಕಾಲಾನುಕ್ರಮೇಣ ಇವುಗಳನ್ನು ಮೂರು ವರ್ಷಕ್ಕೊಮ್ಮೆ ಮಾರ್ಪಾಡು ಮಾಡಲಾಯಿತು. <br /> <br /> ಅಂತೆ ಚಿತ್ರದುರ್ಗ ಮರೆತು ಬೇರೆ ಕಡೆ ಉತ್ಸವಗಳನ್ನು ಆಚರಿಸುತ್ತಾ ಬಂದಿದ್ದು, ದುರ್ಗವನ್ನು ಮರೆತಿರುವುದು ದುರ್ಗದ ದುರಂತವೇ ಸರಿ! ಹೈದರಾಲಿಯ ವಿರುದ್ಧ ಹೋರಾಡಿದ ವೀರ ಮದಕರಿ ನಾಯಕನಿಗೆ ಸಲ್ಲಿಸುವ (ಅ) ಗೌರವವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗವು ಐತಿಹಾಸಿಕ ಮತ್ತು ಚಾರಿತ್ರಿಕ ಹಿನ್ನೆಲೆ ಹೊಂದಿದ್ದು, ಕರ್ನಾಟಕದಲ್ಲೇ ತನ್ನದೇ ಆದ ಛಾಪು ಮೂಡಿಸಿ, `ಏಳು ಸುತ್ತಿನ ಕೋಟೆ~ ಹೊಂದಿ ಪ್ರಖ್ಯಾತಿ ಹೊಂದಿದೆ. <br /> <br /> `ಒನಕೆ ಓಬವ್ವ~ ಯಾರಿಗೆ ಗೊತ್ತಿಲ್ಲ? ರಾಜ್ಯ ಸರ್ಕಾರವು ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಜಿಲ್ಲೆಗಳಲ್ಲಿ ಉತ್ಸವಗಳನ್ನು ಆಚರಿಸಲು ತೀರ್ಮಾನಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 1991 ರಲ್ಲಿ ದುರ್ಗೋತ್ಸವ ಆಚರಿಸಲಾಯಿತು.<br /> <br /> ಆನಂತರ 1992 ರಲ್ಲಿ ಪ್ರತಿ ವರ್ಷ ಉತ್ಸವವನ್ನು ಆಚರಿಸಬೇಕೆಂಬ ತೀರ್ಮಾನದ ಹಿನ್ನೆಲೆಯಲ್ಲಿ ವೈಭವೋಪೇತವಾಗಿ ಆಚರಿಸಲು ನಿರ್ಣಯಿಸಲಾಗಿತ್ತು. ಆದರೆ ಆ ವರ್ಷ ಪ್ರಾರಂಭಿಕ ತಯಾರಿ ಮಾಡಲಾಗಿದ್ದರೂ ಅತಿವೃಷ್ಟಿಯಿಂದ ಉತ್ಸವ ಮುಂದೂಡಲಾಯಿತು. ನಂತರ ಅದು ಹಾಗೆಯೇ ಸತತವಾಗಿ ಒಂದಲ್ಲಾ ಒಂದು ಕಾರಣದಿಂದ 6 ವರ್ಷಗಳ ಕಾಲ ಮುಂದೂಡಲ್ಪಡುತ್ತಾ ಬಂದಿತು. <br /> <br /> 1998 ರಲ್ಲಿ ಸ್ವಲ್ಪ ಮಟ್ಟಿಗೆ ಬರಗಾಲದ ಛಾಯೆಯಿದ್ದರೂ, ಹಲವಾರು ಅಡಚಣೆಗಳು ಬಂದರೂ ಚಿತ್ರದುರ್ಗದ ಹಿರಿಮೆ, ಪರಂಪರೆ, ಸಂಸ್ಕೃತಿಗಳ ಬಗ್ಗೆ ಅಭಿಮಾನ ಹೊಂದಿರುವ ಹಿರಿಯರು `ದುರ್ಗೋತ್ಸವ 98~ ರಲ್ಲಿ ಆಚರಿಸಲು ಸಹಕಾರಿಯಾದರು! <br /> <br /> ಚಿತ್ರದುರ್ಗದ ಅಭಿವೃದ್ಧಿಗೆ ಪೂರಕವಾಗಿ ಹಮ್ಮಿಕೊಂಡಿದ್ದ `ಪ್ರವಾಸೋದ್ಯಮ~ ಹಾಗೂ `ಜಿಲ್ಲಾ ಅಭಿವೃದ್ಧಿ~ ಕುರಿತ ವಿಚಾರ ಸಂಕಿರಣಗಳು ಮತ್ತು ಕವಿಗೋಷ್ಠಿ ತಮ್ಮದೇ ಆದ ಅರ್ಥಪೂರ್ಣ ಕಳೆ ನೀಡಿದವು.<br /> <br /> ಅಂದಿನಿಂದ ನಡೆದು ಬಂದ ಆಚರಣೆ ಇಂದಿಗೂ ಕೂಡ ಹಂಪಿ, ಬಾದಾಮಿ, ಮೈಸೂರು, ಕಿತ್ತೂರು, ಇನ್ನಿತರೆ ಪ್ರವಾಸಿ ತಾಣಗಳಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಜಿಲ್ಲಾ ಉತ್ಸವ ಕಾಲಾನುಕ್ರಮೇಣ ಇವುಗಳನ್ನು ಮೂರು ವರ್ಷಕ್ಕೊಮ್ಮೆ ಮಾರ್ಪಾಡು ಮಾಡಲಾಯಿತು. <br /> <br /> ಅಂತೆ ಚಿತ್ರದುರ್ಗ ಮರೆತು ಬೇರೆ ಕಡೆ ಉತ್ಸವಗಳನ್ನು ಆಚರಿಸುತ್ತಾ ಬಂದಿದ್ದು, ದುರ್ಗವನ್ನು ಮರೆತಿರುವುದು ದುರ್ಗದ ದುರಂತವೇ ಸರಿ! ಹೈದರಾಲಿಯ ವಿರುದ್ಧ ಹೋರಾಡಿದ ವೀರ ಮದಕರಿ ನಾಯಕನಿಗೆ ಸಲ್ಲಿಸುವ (ಅ) ಗೌರವವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>