ಹಾಗೊಮ್ಮೆ ಅರ್ಥ ಹುಡುಕಹೊರಟರೆ, ಮಾರ್ಕ್ಸ್ ಹೇಳಿದ ‘ನೋವಿನಿಂದ ಪಾರಾಗುವುದಕ್ಕೆ ಧರ್ಮದ ಮೊರೆ ಹೊಕ್ಕರು’, ‘ಧರ್ಮವು ಜನರ ಅಫೀಮು’ ಎಂಬ ಮಾತುಗಳಿಗೆ ಈ ಚುನಾವಣಾ ಸಂದರ್ಭ ಒಂದು ಜ್ವಲಂತ ಉದಾಹರಣೆಯಾಗಿ ನಿಂತು, ಮಾರ್ಕ್ಸ್ ಚಿಂತನೆಗಳು ಇಂದಿಗೂ ಪ್ರಸ್ತುತ ಎನಿಸುವುದಿಲ್ಲವೇ? ‘ಮಂಗಳಕರವಾದ ಚಿಂತನೆಗಳು ಎಲ್ಲ ಕಡೆಯಿಂದ ನಮಗೆ ಬರಲಿ’ ಎಂಬ ಋಗ್ವೇದದ ಸಾಲುಗಳು, ಭಾರತೀಯತೆಯನ್ನು ವ್ಯಾಖ್ಯಾನಿಸುತ್ತಿರುವುದಾದರೂ ಹೇಗೆ ಎಂದು ಶ್ರೀಯುತರು ನಮಗೆ ತಿಳಿಸಿಕೊಡಲಿ.