ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು- ಮುಂಜಾಗ್ರತೆ

Last Updated 9 ಜೂನ್ 2014, 19:30 IST
ಅಕ್ಷರ ಗಾತ್ರ

ಮಳೆಗಾಲ ಶುರುವಾಗಿದೆ. ಆದರೆ ಮುಂಗಾರಿನ ಅಬ್ಬರಕ್ಕೆ ಅವಘಡಗಳು ಸಂಭವಿಸದಂತೆ  ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಬಹುಪಾಲು ನಗರಗಳ ರಾಜಕಾಲುವೆ, -ಮುಖ್ಯ ಕಾಲುವೆಗಳು ಒತ್ತುವರಿಯಾಗಿದ್ದು, ಕೆಲವೇ ನಿಮಿಷದ ಮಳೆ ಕೂಡ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಮಹಾಪೂರದ ಭೀತಿ ಮೂಡಿಸುತ್ತಿದೆ. ಕಟ್ಟಿಕೊಂಡಿ­ರುವ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಕಾಲುವೆಗಳ ದುರಸ್ತಿ ಮಾಡಿಸುವ ಮೂಲಕ ಇದರ ತೀವ್ರತೆ ತಗ್ಗಿಸಲು ಸಾಧ್ಯ. 

ಮಳೆ ನೀರಿನೊಂದಿಗೆ ಚರಂಡಿ ನೀರು, ಕಾರ್ಖಾನೆ­ಗಳ ತ್ಯಾಜ್ಯ ಜಲಮೂಲಗಳನ್ನು ಸೇರುವುದರಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗ    ಹರಡುವ ಸಾಧ್ಯತೆಗಳಿವೆ. ಕುಡಿಯುವ ನೀರು ಸಂಗ್ರಹಾಗಾರಗಳಲ್ಲಿ ಕ್ಲೊರಿನೀಕರಣದೊಂದಿಗೆ ವ್ಯವಸ್ಥಿತ ರೀತಿಯಲ್ಲಿ ನೀರಿನ ಶುದ್ಧೀಕರಣವಾಗಬೇಕು.

ಸೊಳ್ಳೆ-ನೊಣಗಳ ನಿವಾರಣೆಗೆ ಕ್ರಮ ಜರುಗಿಸಬೇಕು.  ಸಂತೆ-ಜಾತ್ರೆಗಳು ನಡೆಯುವ ಸ್ಥಳಗಳಲ್ಲಿ ಮಾರುವ ತಿಂಡಿ,- ಪಾನೀಯಗಳ ಗುಣಮಟ್ಟದ ಮೇಲೆ ನಿಗಾ ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು.

–ಡಾ.ಸಮೀರ ಎಲ್.ಹಾದಿಮನಿ
ಆಲಮೇಲ (ಸಿಂದಗಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT