ಬಸವನಗುಡಿ ರಸ್ತೆಯ ಶ್ರೀ ರಾಮಕೃಷ್ಣ ಆಶ್ರಮದ ಬಳಿ ನಿರ್ಮಿಸಿರುವ ತಂಗುದಾಣದಲ್ಲಿ ಕೆಳಗಡೆ ಲೋಹದ ಪಟ್ಟಿಗಳನ್ನು ಹೆಚ್ಚಾಗಿ ಅಳವಡಿಸಲಾಗಿದೆ. ಈ ಪಟ್ಟಿಗಳನ್ನು ಕೂಡಲೇ ಕತ್ತರಿಸಬೇಕು. ಅನವಶ್ಯಕವಾಗಿ ಹಾಕಲಾಗಿರುವ ಪಟ್ಟಿಗಳಿಂದ ಪಾದಚಾರಿಗಳು ಎಡವಿ ಬೀಳುವುದರಲ್ಲಿ ಸಂಶಯವೇ ಇಲ್ಲ. ಆದಷ್ಟು ಬೇಗ ಇದನ್ನು ಸರಿಪಡಿಸಬೇಕೆಂದು ವಿನಂತಿಸುತ್ತೇನೆ.