<p>ಬೆಂಗಳೂರಿನಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ವಿಶ್ವ ಹಿಂದೂ ಪರಿಷತ್ ಕುರಿತು ಹೇಳಿರುವ ಮಾತು (ಪ್ರ.ವಾ., ಫೆ.9) ವಾಸ್ತವಾಂಶಕ್ಕೆ ತದ್ವಿರುದ್ಧವಾಗಿದ್ದು, ಅಚ್ಚರಿಯನ್ನು ಮೂಡಿಸುವಂತಿದೆ. ಆದರೆ ಅವರು ಹೇಳಿರುವುದರಲ್ಲಿ ಒಂದು ಮಾತಂತೂ ಖಂಡಿತಾ ಸತ್ಯ. ಏನೆಂದರೆ, ‘ಸ್ವಾತಂತ್ರ್ಯ ಬಂದ ನಂತರ ರಾಷ್ಟ್ರದಲ್ಲಿ ಹಿಂದುತ್ವದ ಕಲ್ಪನೆ ಇರಲಿಲ್ಲ’. ಹೌದು, ಏಕೆಂದರೆ ಆಗ ಸಂವಿಧಾನದ ಆಶಯದಂತೆ ಭಾರತೀಯರೆಲ್ಲರೂ ‘ಒಂದು’ (ಹಿಂದೂ ಅಲ್ಲ) ಎಂಬ ಭಾವನೆ ಎಲ್ಲೆಲ್ಲೂ ಮೊಳಗಿತ್ತು. ಆದರೆ ವಿಶ್ವ ಹಿಂದೂ ಪರಿಷತ್ ಈ ಐವತ್ತು ವರ್ಷಗಳಲ್ಲಿ ಈ ವಿಶಾಲ ಮನೋಭಾವಕ್ಕೆ ಕೋಮುದ್ವೇಷದ ವಿಷ ಹಿಂಡುತ್ತಿದೆ.<br /> <br /> ‘ವಿಎಚ್ಪಿ ಇಡೀ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಿತು’ ಎಂಬ ಹೆಗ್ಗಡೆಯವರ ಮಾತು ಕೇಳಿದವರು ನಕ್ಕಾರು. ಒಂದುಗೂಡಿಸುವ ಕೆಲಸ ವಿಎಚ್ಪಿಯ ಅಜೆಂಡಾನೇ ಅಲ್ಲ. ನಾನಾ ಜಾತಿ– ಧರ್ಮ, ಬಹುಸಂಸ್ಕೃತಿಗಳಿಂದ ವೈವಿಧ್ಯದಲ್ಲೂ ಏಕತೆ ಮೆರೆಯುತ್ತಿರುವ ನಮ್ಮ ಭಾರತವನ್ನು ಸಂವಿಧಾನಬದ್ಧವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ವಿಎಚ್ಪಿ ನಿಲುವು ವಿಚ್ಛಿದ್ರಕಾರಿಯಾದುದು. ಈ ಸಂಘಟನೆ, ಜಾತಿ– ಮತ– ಧರ್ಮದ ಬಗ್ಗೆ ಎಲ್ಲರಲ್ಲೂ ವಿಶಾಲ ಮನೋಭಾವ ಬೆಳೆಸಿದೆ ಎಂಬ ಹೆಗ್ಗಡೆಯವರ ಮಾತು, ಅದರ ಸಿದ್ಧಾಂತ, ಕಾರ್ಯಚಟುವಟಿಕೆಗಳಿಗೆ ತದ್ವಿರುದ್ಧವಾದುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ವಿಶ್ವ ಹಿಂದೂ ಪರಿಷತ್ ಕುರಿತು ಹೇಳಿರುವ ಮಾತು (ಪ್ರ.ವಾ., ಫೆ.9) ವಾಸ್ತವಾಂಶಕ್ಕೆ ತದ್ವಿರುದ್ಧವಾಗಿದ್ದು, ಅಚ್ಚರಿಯನ್ನು ಮೂಡಿಸುವಂತಿದೆ. ಆದರೆ ಅವರು ಹೇಳಿರುವುದರಲ್ಲಿ ಒಂದು ಮಾತಂತೂ ಖಂಡಿತಾ ಸತ್ಯ. ಏನೆಂದರೆ, ‘ಸ್ವಾತಂತ್ರ್ಯ ಬಂದ ನಂತರ ರಾಷ್ಟ್ರದಲ್ಲಿ ಹಿಂದುತ್ವದ ಕಲ್ಪನೆ ಇರಲಿಲ್ಲ’. ಹೌದು, ಏಕೆಂದರೆ ಆಗ ಸಂವಿಧಾನದ ಆಶಯದಂತೆ ಭಾರತೀಯರೆಲ್ಲರೂ ‘ಒಂದು’ (ಹಿಂದೂ ಅಲ್ಲ) ಎಂಬ ಭಾವನೆ ಎಲ್ಲೆಲ್ಲೂ ಮೊಳಗಿತ್ತು. ಆದರೆ ವಿಶ್ವ ಹಿಂದೂ ಪರಿಷತ್ ಈ ಐವತ್ತು ವರ್ಷಗಳಲ್ಲಿ ಈ ವಿಶಾಲ ಮನೋಭಾವಕ್ಕೆ ಕೋಮುದ್ವೇಷದ ವಿಷ ಹಿಂಡುತ್ತಿದೆ.<br /> <br /> ‘ವಿಎಚ್ಪಿ ಇಡೀ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಿತು’ ಎಂಬ ಹೆಗ್ಗಡೆಯವರ ಮಾತು ಕೇಳಿದವರು ನಕ್ಕಾರು. ಒಂದುಗೂಡಿಸುವ ಕೆಲಸ ವಿಎಚ್ಪಿಯ ಅಜೆಂಡಾನೇ ಅಲ್ಲ. ನಾನಾ ಜಾತಿ– ಧರ್ಮ, ಬಹುಸಂಸ್ಕೃತಿಗಳಿಂದ ವೈವಿಧ್ಯದಲ್ಲೂ ಏಕತೆ ಮೆರೆಯುತ್ತಿರುವ ನಮ್ಮ ಭಾರತವನ್ನು ಸಂವಿಧಾನಬದ್ಧವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ವಿಎಚ್ಪಿ ನಿಲುವು ವಿಚ್ಛಿದ್ರಕಾರಿಯಾದುದು. ಈ ಸಂಘಟನೆ, ಜಾತಿ– ಮತ– ಧರ್ಮದ ಬಗ್ಗೆ ಎಲ್ಲರಲ್ಲೂ ವಿಶಾಲ ಮನೋಭಾವ ಬೆಳೆಸಿದೆ ಎಂಬ ಹೆಗ್ಗಡೆಯವರ ಮಾತು, ಅದರ ಸಿದ್ಧಾಂತ, ಕಾರ್ಯಚಟುವಟಿಕೆಗಳಿಗೆ ತದ್ವಿರುದ್ಧವಾದುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>