ಮುಖ್ಯಮಂತ್ರಿ ಆದವರೆಲ್ಲ ಅವರವರ ಸಮುದಾಯಗಳಿಗಷ್ಟೇ ಅನುಕೂಲ ಮಾಡುತ್ತಾ ಹೋದರೆ, ಮುಖ್ಯಮಂತ್ರಿ ಆಗುವ ಅವಕಾಶದಿಂದ ವಂಚಿತರಾಗಿರುವ ನೂರಾರು ಜಾತಿ, ಸಮುದಾಯದವರ ಗತಿ ಏನು? ಅಧಿಕಾರ ಸಿಕ್ಕಾಗ ತಮ್ಮ ಜಾತಿಯವರಿಗೆ ಅನುಕೂಲ ಮಾಡಿಕೊಡಬೇಕೆಂಬ ಮನಸ್ಥಿತಿ, ಅದರಲ್ಲೂ ಜಾತ್ಯತೀತ ತತ್ವದ ಮೇಲೆ ರಚನೆಯಾದ ಪಕ್ಷವೆಂದು ಘೋಷಿಸಿಕೊಂಡ ಜೆಡಿಎಸ್ ಮುಖಂಡರ ಈ ಮಾತು ಸಂವಿಧಾನವಿರೋಧಿ ನಿಲುವಿನಿಂದ ಕೂಡಿದೆ.