ಇದು ಸರಿಯಾದ ವಿಶ್ಲೇಷಣೆ ಅಲ್ಲ. ವಿರೋಧ ಪಕ್ಷಗಳ ಹೊಣೆಗಾರಿಕೆಯು ಆಡಳಿತ ಪಕ್ಷದಕ್ಕಿಂತ ಕಡಿಮೆಯೇನಲ್ಲ. ಬಜೆಟ್ ಅಧಿವೇಶನದ ಪ್ರಾರಂಭದಿಂದಲೂ ವಿರೋಧ ಪಕ್ಷಗಳ ಕೆಲವರು ಕಲಾಪಕ್ಕೆ ಅಡ್ಡಿಮಾಡುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಧೋರಣೆ ಈ ವಿಷಯದಲ್ಲಿ ಏನು ಎನ್ನುವುದು ಸ್ಪಷ್ಟವಾಗಿಲ್ಲ. ಅವಿಶ್ವಾಸ ಗೊತ್ತುವಳಿಯ ಬಗ್ಗೆ ತಾನು ಚರ್ಚೆಗೆ ಸಿದ್ಧವೆಂದು ಆಡಳಿತ ಪಕ್ಷ ಸ್ಪಷ್ಟವಾಗಿ ಹೇಳಿತ್ತು. ಆದರೆ ಕೆಲವು ಸಂಸದರು ತಮ್ಮ ರಾಜ್ಯದ ಹಿತವನ್ನಷ್ಟೇ ಮುಂದುಮಾಡಿ ಗದ್ದಲವೆಬ್ಬಿಸಿ ಸಂಸದೀಯ ನಡವಳಿಕೆಗೆ ವಿರುದ್ಧವಾಗಿ ವರ್ತಿಸಿದ್ದಾರೆ.