ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಪೂಜೆ ಸಲ್ಲದು

Last Updated 15 ಜೂನ್ 2014, 19:30 IST
ಅಕ್ಷರ ಗಾತ್ರ

ತಮ್ಮ ಕಾಲಿಗೆರಗಿ ನಮಸ್ಕರಿ­ಸುವು­ದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ನೂತನ ಸಂಸದರಿಗೆ ಕಿವಿಮಾತು ಹೇಳಿದ್ದಾರೆ. (ಪ್ರ.ವಾ. ಜೂ.7) ಹೊಗಳು­ಭಟರು ಪ್ರಧಾನಿಯವರ ಮಾತನ್ನು ಪಾಲಿಸ­ಬೇಕು. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಪೂಜೆಗೆ ಅವ­ಕಾಶವಿಲ್ಲ. ಸಂಸದರು ತಮ್ಮ ಪ್ರಭುಗಳಾದ ಮತ­ದಾರರ ಹಾಗೂ ಮತ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರ­ದತ್ತ ಆಸಕ್ತ­ರಾಗಬೇಕು.

ಸಂವಿಧಾನವು ಮತದಾರರಿಗೆ ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಯಿಸಿ­ಕೊಳ್ಳುವ ಹಕ್ಕು  (ರೈಟ್ ಟು ರಿಕಾಲ್). ನೀಡದಿರುವುದರಿಂದ ಮತ­ದಾರರು ನಿಸ್ಸಹಾಯಕರಾಗಿರುತ್ತಾರೆ. ಕ್ಷೇತ್ರದ ಮತ­ದಾರ­ರಿಗೆ ಸಂಸದರ ದರ್ಶನಕ್ಕೆ ಇನ್ನೊಂದು ಚುನಾವಣೆ ಯವರೆಗೆ ಕಾಯಬೇಕಾದ ಸಂದರ್ಭ ಬಾರದಿರಲಿ.
ಸದಾನಂದ ಹೆಗಡೆಕಟ್ಟೆ ಮೂಡುಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT