ಮತ್ತೆ ಕುಲಾಂತರಿ ಬೆಳೆ ಸುದ್ದಿಯಲ್ಲಿದೆ. ಕೇಂದ್ರದ ಪರಿಸರ ಸಚಿವ ವೀರಪ್ಪ ಮೊಯಿಲಿ ಅವರು ಕುಲಾಂತರಿ ಬೆಳೆಗಳನ್ನು ಪ್ರಯೋಗಾರ್ಥ ಬೆಳೆಯಲು ಅನುಮತಿ ನೀಡಿದ್ದಾರೆ. ರಮೇಶ್ ಜೈರಾಮ್ ಪರಿಸರ ಸಚಿವರಾಗಿದ್ದಾಗ ಜೈವಿಕ ಸುರಕ್ಷತೆ ಅಡಿಯಲ್ಲಿ ಕುಲಾಂತರಿ ಬೆಳೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದರು.
ಕಾಂಗ್ರೆಸ್ ಸರ್ಕಾರದ ಈ ಇಬ್ಬಗೆಯ ನೀತಿ ಬಗ್ಗೆ ಆಕ್ರೋಶ ಈಗಾಗಲೇ ವ್ಯಕ್ತವಾಗಿದೆ.
ಈ ಪ್ರಜಾವಿರೋಧಿ ಆದೇಶ ಸರಿಯಲ್ಲ. ಪ್ರಯೋಗಾರ್ಥ ಬೆಳೆ ಬೆಳೆಯಲು ರಾಜ್ಯ ಸರ್ಕಾರ ಅನುಮತಿ ನೀಡಬಾರದು ಎಂದು ಕೋರುವೆ.