ವಾಚಕರವಾಣಿಯ ನನ್ನ ಪತ್ರಕ್ಕೆ ರಾಜು ಚಿಂಗಳೆಯವರು ನೀಡಿದ ಸ್ಪಂದನಕ್ಕೆ (ಪ್ರ.ವಾ., ನ.10) ನನ್ನ ಮರುಸ್ಪಂದನ. ಅರುಂಧತಿ ನಾಗ್ ಅವರ ಹೇಳಿಕೆಗೆ ಪ್ರತಿಯಾಗಿ ಕೆಲವು ಹೊಸ ತಲೆಮಾರಿನ ನಾಟಕಕಾರರ ಹೆಸರನ್ನು ಪಟ್ಟಿ ಉದ್ದವಾಗಬಾರದೆಂದು ಸಾಂಕೇತಿಕವಾಗಿ ಉಲ್ಲೇಖಿಸಿದ್ದೆ ಅಷ್ಟೇ.
ಹಾಗೆ ನೋಡಿದರೆ ನಾನು ಹೆಸರಿಸಿದ ವ್ಯಕ್ತಿಗಳು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲಸಿರುವವರು. ಆದರೆ ಚಿಂಗಳೆ ಯವರ ಪಟ್ಟಿಯಲ್ಲಿ ಡಿ.ಎಸ್. ಚೌಗಲೆ ಅವರನ್ನು ಹೊರತುಪಡಿಸಿ ಉಳಿದವರು ಯಾರೂ ಉತ್ತರ ಕರ್ನಾಟಕದವರಲ್ಲ, ಹಾಗೆ ಆಗಬೇಕಾಗಿಯೂ ಇಲ್ಲ! ಮೇಲಾಗಿ ನಾವಿಬ್ಬರೂ ಹೆಸರಿಸಿದವರೆಲ್ಲರೂ ತಮ್ಮ ಬರವಣಿಗೆಯ ಮೂಲಕ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿರುವವರು ಎಂಬುದನ್ನು ಅರಿಯಲು ಬೇಕಾದ್ದು ಅಧ್ಯಯನ ಅಲ್ಲ ಸಾಮಾನ್ಯ ಜ್ಞಾನ.
(ಇಲ್ಲಿಗೆ ಈ ಪತ್ರ ವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆ)