<p>ವಿಮರ್ಶಕ ಪ್ರೊ. ಜಿ.ಎಚ್.ನಾಯಕ ಅವರು ದೇವರಾಜ ಅರಸು ಅವರ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದಾರೆ (ಪ್ರ.ವಾ., ಜೂನ್ 11).<br /> ‘ಅರಸರು ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದ್ದಾರೆ. ಅವರು ಸಂಪನ್ನ ಶ್ರೇಷ್ಠರಲ್ಲ. ಸ್ವಜನಪಕ್ಷಪಾತದಲ್ಲೂ ಸಿದ್ಧಹಸ್ತರಾಗಿದ್ದರು’ ಎಂದಿದ್ದಾರೆ.<br /> <br /> ಮುಖ್ಯಮಂತ್ರಿಯಾದವರು ಹತ್ತು ತಲೆಮಾರು ಕೂತು ತಿನ್ನುವಂತೆ ಆಸ್ತಿಪಾಸ್ತಿ, ಹಣ ಮಾಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅರಸು ಭ್ರಷ್ಟಾಚಾರ ಮಾಡಿ ಯಾರಿಗೆ ಕೊಟ್ಟರು? ಅವರ ಮಕ್ಕಳು ದಿಕ್ಕಾಪಾಲಾದ ಕಣ್ಣ ಮುಂದಿನ ಸತ್ಯವನ್ನು ಒಮ್ಮೆ ನೋಡಿ.<br /> <br /> ಸದಾಶಿವನಗರದ ಬೃಹತ್ ಬಂಗಲೆಗಳ ನಡುವೆ ಪಾಳುಬಿದ್ದ, ಅರಸರು ಜೀವಿಸಿದ್ದ ಮನೆಯೂ ಇಂದು ಇಲ್ಲದಂತಾಗಿದೆ. ಅವರ ಕಾಲದ ಭ್ರಷ್ಟಾಚಾರದ ಒಂದೆರಡು ಹಗರಣಗಳನ್ನಾದರೂ ಹೇಳಲಿ.<br /> <br /> ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಟ್ಟ ಅರಸು ತಮ್ಮ ಜಾತಿಯನ್ನೇ ಆ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಕಡೆಗೆ ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಮಾಡಿದ ಶಿಫಾರಸಿನ ಅನ್ವಯ ಸರ್ಕಾರವು ಅರಸು ಸಮುದಾಯವನ್ನು II(ಎ) ಪಟ್ಟಿಗೆ ಸೇರಿಸಿದೆ.<br /> <br /> ಹೀಗಿರುವಾಗ ಅರಸರು ಹೇಗೆ ಸ್ವಜನಪಕ್ಷಪಾತಿಯಾಗುತ್ತಾರೆ? ‘ಅರಸು ಸಂಪನ್ನ ಶ್ರೇಷ್ಠರೆಂದು ನಾನಂತೂ ಪ್ರಮಾಣಪತ್ರ ನೀಡಲಾರೆ’ ಎಂದಿರುವ ನಾಯಕರ ಮಾತು ಆತ್ಮರತಿಯಂತಿದೆ. ಅವರಿಗೆ ಪ್ರಮಾಣಪತ್ರ ಕೊಡುವವರು ಎಲ್ಲೋ ಕಾಡುಮೇಡುಗಳಲ್ಲಿ, ಹಟ್ಟಿಹಾಡಿಗಳಲ್ಲಿ, ಗಲ್ಲಿ ಗಟಾರಗಳಲ್ಲಿದ್ದಾರೆ. ಅರಸು ಅವರಿಗೆ ನಾಯಕರಂತಹವರ ಪ್ರಮಾಣಪತ್ರದ ಅವಶ್ಯಕತೆಯಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಮರ್ಶಕ ಪ್ರೊ. ಜಿ.ಎಚ್.ನಾಯಕ ಅವರು ದೇವರಾಜ ಅರಸು ಅವರ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದಾರೆ (ಪ್ರ.ವಾ., ಜೂನ್ 11).<br /> ‘ಅರಸರು ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದ್ದಾರೆ. ಅವರು ಸಂಪನ್ನ ಶ್ರೇಷ್ಠರಲ್ಲ. ಸ್ವಜನಪಕ್ಷಪಾತದಲ್ಲೂ ಸಿದ್ಧಹಸ್ತರಾಗಿದ್ದರು’ ಎಂದಿದ್ದಾರೆ.<br /> <br /> ಮುಖ್ಯಮಂತ್ರಿಯಾದವರು ಹತ್ತು ತಲೆಮಾರು ಕೂತು ತಿನ್ನುವಂತೆ ಆಸ್ತಿಪಾಸ್ತಿ, ಹಣ ಮಾಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅರಸು ಭ್ರಷ್ಟಾಚಾರ ಮಾಡಿ ಯಾರಿಗೆ ಕೊಟ್ಟರು? ಅವರ ಮಕ್ಕಳು ದಿಕ್ಕಾಪಾಲಾದ ಕಣ್ಣ ಮುಂದಿನ ಸತ್ಯವನ್ನು ಒಮ್ಮೆ ನೋಡಿ.<br /> <br /> ಸದಾಶಿವನಗರದ ಬೃಹತ್ ಬಂಗಲೆಗಳ ನಡುವೆ ಪಾಳುಬಿದ್ದ, ಅರಸರು ಜೀವಿಸಿದ್ದ ಮನೆಯೂ ಇಂದು ಇಲ್ಲದಂತಾಗಿದೆ. ಅವರ ಕಾಲದ ಭ್ರಷ್ಟಾಚಾರದ ಒಂದೆರಡು ಹಗರಣಗಳನ್ನಾದರೂ ಹೇಳಲಿ.<br /> <br /> ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಟ್ಟ ಅರಸು ತಮ್ಮ ಜಾತಿಯನ್ನೇ ಆ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಕಡೆಗೆ ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಮಾಡಿದ ಶಿಫಾರಸಿನ ಅನ್ವಯ ಸರ್ಕಾರವು ಅರಸು ಸಮುದಾಯವನ್ನು II(ಎ) ಪಟ್ಟಿಗೆ ಸೇರಿಸಿದೆ.<br /> <br /> ಹೀಗಿರುವಾಗ ಅರಸರು ಹೇಗೆ ಸ್ವಜನಪಕ್ಷಪಾತಿಯಾಗುತ್ತಾರೆ? ‘ಅರಸು ಸಂಪನ್ನ ಶ್ರೇಷ್ಠರೆಂದು ನಾನಂತೂ ಪ್ರಮಾಣಪತ್ರ ನೀಡಲಾರೆ’ ಎಂದಿರುವ ನಾಯಕರ ಮಾತು ಆತ್ಮರತಿಯಂತಿದೆ. ಅವರಿಗೆ ಪ್ರಮಾಣಪತ್ರ ಕೊಡುವವರು ಎಲ್ಲೋ ಕಾಡುಮೇಡುಗಳಲ್ಲಿ, ಹಟ್ಟಿಹಾಡಿಗಳಲ್ಲಿ, ಗಲ್ಲಿ ಗಟಾರಗಳಲ್ಲಿದ್ದಾರೆ. ಅರಸು ಅವರಿಗೆ ನಾಯಕರಂತಹವರ ಪ್ರಮಾಣಪತ್ರದ ಅವಶ್ಯಕತೆಯಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>